ಹಾಸನ: ಜುಲೈ 23ರಂದು ಚನ್ನರಾಯಪಣ್ಣ ತಾಲೂಕಿನ ಕೋಡಿಲಿಂಗೇಶ್ವರ ದೇವಾಲಯದ ಬೆಟ್ಟದ ಬಳಿ ಯುವತಿಯೊಬ್ಬಳ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿದ ಪೊಲೀಸ್ರಿಗೆ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರ್ಲಿಲ್ಲ. ಸ್ಥಳೀಯರು ಸಹ ಆಕೆಯನ್ನ ನೋಡಿದಂತೆ ಅಲ್ಲಿಯವಳು ಆಗಿರ್ಲಿಲ್ಲ. ಇದೀಗ ಯುವತಿಯನ್ನ ಯಾರು ಕೊಲೆ ಮಾಡಿದ್ದು ಅನ್ನೋದು ತಿಳಿದಿದೆ.
ಯುವತಿಯ ಫೋಟೋವನ್ನ ವಾಟ್ಸಪ್ ನಲ್ಲಿ ಪೊಲೀಸ್ರು ಹರಿಬಿಟ್ಟಿದ್ದಾರೆ. ಇದರ ಪರಿಣಾಮ, ಕೊಲೆ ಹಿಂದಿನ ಸತ್ಯ ಬಯಲಾಗಿದೆ. ತಮಿಳುನಾಡು ಮೂಲದ ಯುವತಿಯನ್ನ ಹತ್ಯೆ ಮಾಡಿದ್ದು ಆಕೆಯ ಮಾವ. ಈ ಬಗ್ಗೆ ಪೊಲೀಸ್ರು ಹೆಚ್ಚಿನ ತನಿಖೆಯನ್ನ ಕೈಗೊಂಡಿದ್ದಾರೆ.
ಘಟನೆ ಹಿನ್ನೆಲೆ
ತಮಿಳುನಾಡು ಮೂಲದ ಯುವತಿ ಬೆಂಗಳೂರಿನಲ್ಲಿ ಬಿಕಾಂ ಮುಗಿಸಿ ಮಾಲ್ ವೊಂದರಲ್ಲಿ ಕೆಲಸ ಮಾಡ್ತಿದ್ದಳು. ಹೀಗಾಗಿ ಆಕೆ ಅತ್ತೆಯ ಮನೆಯಲ್ಲಿ ವಾಸವಾಗಿದ್ದಳು. ಹೀಗಿರುವಾಗ ಮಾವ ಶ್ರೀನಿವಾಸ ಜೊತೆ ಸಲುಗೆ ಬೆಳದಿದೆ. ಅದು ಪ್ರೀತಿಗೆ ತಿರುಗಿ ಮತ್ತೊಂದು ಸ್ವರೂಪ ಸಹ ಪಡೆದುಕೊಂಡಿದೆ. ಇದ್ರಿಂದಾಗಿ ಯುವತಿ ಗರ್ಭಿಣಿಯಾಗಿದ್ದಾಳೆ. ಗರ್ಭಿಣಿಯಾದ್ಮೇಲೆ ಯುವತಿಯನ್ನ ಮದುವೆಯಾಗಲು ಮಾವ ಒಪ್ಪಿಲ್ಲ. ಗರ್ಭಪಾತ ಮಾಡಿಸುವಂತೆ ಹೇಳಿದ್ದಾನೆ.
ಮಾವ ಶ್ರೀನಿವಾಸನ ಮಾತು ಕೇಳಲು ಯುವತಿ ಸುತಾರಂ ಒಪ್ಪಿಲ್ಲ. ಆಗ ಶ್ರೀನಿವಾಸ ಪ್ಲಾನ್ ಮಾಡಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕೋಡಿಲಿಂಗೇಶ್ವರ ದೇವಸ್ಥಾನದ ಬೆಟ್ಟಕ್ಕೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಆಕೆಯನ್ನ ವೇಲ್ ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿ, ಎಸ್ಕೇಪ್ ಆಗಿದ್ದ.ಈಗಾಗ್ಲೇ ಮದುವೆಯಾಗಿ ಎರಡು ಮಕ್ಕಳನ್ನ ಹೊಂದಿರುವ ಶ್ರೀನಿವಾಸ ಇಂಥಾ ನೀಚಕೃತ್ಯವೆಸಗಿದ್ದಾನೆ. ಅತ್ತೆಯ ಮನೆಯಲ್ಲಿ ಆಶ್ರಯ ಪಡೆದ ಯುವತಿ ಮಾಡಿಕೊಂಡ ಅನಾಹುತಕ್ಕೆ ಜೀವವನ್ನೆ ಬಲಿ ಕೊಡಬೇಕಾಯ್ತು.