ನವದೆಹಲಿ: ಗೋಡ್ಸ್ ದೇಶಭಕ್ತ ಎಂದು ಹೇಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಕ್ಷಮೆ ಕೋರಿದ್ದಾರೆ. ನನ್ನಿಂದ ಯಾರಿಗಾದ್ರೂ ನೋವಾಗಿದ್ದಾರೆ ಕ್ಷಮೆ ಕೋರುತ್ತೇನೆ ಅಂತಾ ಹೇಳಿದ್ದಾರೆ. ಆದ್ರೆ, ನನ್ನ ಹೇಳಿಕೆಯನ್ನ ತಿರುಚಲಾಗಿದೆ. ಇದು ಖಂಡನಿಯ ಎಂದರು.
ಸದನದ ಕಲಾಪದಲ್ಲಿ ಮಾತ್ನಾಡಿದ ಸಂಸದೆ ಪ್ರಗ್ಯಾ ಠಕೂರ್ ಕ್ಷಮೆ ಕೋರಿದ್ದಾರೆ. ಸಂಸದೆ ಹೇಳಿಕೆ ಖಂಡಿಸಿ ಎಲ್ಲೆಡೆಯಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ರಕ್ಷಣಾ ಸಚಿವ ರಾಜನಾಥ ಸಿಂಗ್ ಸಹ ವಿರೋಧಿಸಿದ್ರು. ಅಲ್ದೇ, ರಕ್ಷಣಾ ಸಮಿತಿಯಿಂದ ಸಹ ತೆಗೆಯಲಾಗಿತ್ತು. ಸಂಸದ ರಾಹುಲ ಗಾಂಧಿ ಪ್ರಗ್ಯಾ ಠಾಕೂರ್ ಭಯೋತ್ಪಾದಕಿ ಅಂತಾ ಹೇಳಿದ್ರು.
ರಾಹುಲ ಗಾಂಧಿ ಮಾತಿಗೆ ತಿರುಗೇಟು ನೀಡಿದ ಸಂಸದೆ, ಕೆಲವರು ನನ್ನನ್ನ ಭಯೋತ್ಪಾದಕಿ ಅಂದ್ರು. ಹಾಗೇ ಹೇಳಲು ಅವರ ಬಳಿ ಸಾಕ್ಷಿಯಿಲ್ಲ ಅಂತಾ ಹೇಳಿದ್ರು.