ತೆಲಂಗಾಣ: ಪಶು ವೈದ್ಯೆ ಮೇಲೆ ನಡೆದ ರೇಪ್ ಆ್ಯಂಡ್ ಮರ್ಡರ್ ಕೇಸ್ ಗೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಪ್ಲಾನ್ ಮಾಡಿ ವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ ಅನ್ನೋ ಸ್ಫೋಟಕ ಮಾಹಿತಿ ಹೊರ ಬಂದಿದೆ.
ಪ್ರಿಯಾಂಕಾ ಹೋಗ್ತಿದ್ದ ಮಾರ್ಗ ಮಧ್ಯದಲ್ಲಿ ಲಾರಿ ನಿಲ್ಲಿಸಿಕೊಂಡು ನಿಂತಿದ್ದ ಚಾಲಕ ಹಾಗೂ ಕ್ಲೀನರ್, ಬೇಕೆಂದೇ ಆಕೆಯ ಸ್ಕೂಟರ್ ಪಂಚ್ಚರ್ ಆಗುವಂತೆ ಮಾಡಿದ್ರು. ಬಳಿಕ ಸಹಾಯ ಮಾಡುವ ನೆಪದಲ್ಲಿ ಬಂದು ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ. ಕೃತ್ಯ ನಡೆದ ಮಾರ್ಗದ ಸಿಸಿಟಿವಿ ದೃಶ್ಯಗಳನ್ನ ಪರಿಶೀಲನೆ ಮಾಡಿ ಆರೋಪಿಗಳನ್ನ ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ ಅಂತಾ ಹೇಳಲಾಗ್ತಿದೆ.
ಘಟನೆ ನಡೆದ ಟೈಂನಲ್ಲಿ ಸಹೋದರಿ ಭವ್ಯಗೆ ಫೋನ್ ಮಾಡಿದ್ದ ಪ್ರಿಯಾಂಕಾ ಕೆಲ ಅಪರಿಚಿತ ವ್ಯಕ್ತಿಗಳು ನೋಡ್ತಿರುವುದಾಗಿ ಹೇಳಿದ್ದಳಂತೆ. ಆಗ ಧೈರ್ಯ ಹೇಳಿದ್ದ ಸಹೋದರಿ ಗಾಡಿಯನ್ನ ಅಲ್ಲಿಯೇ ಬಿಟ್ಟು ಬೇರೊಂದು ಗಾಡಿಯಲ್ಲಿ ಬರಲು ಹೇಳಿದ್ರಂತೆ. ಕೆಲ ಹೊತ್ತಿನ ಬಳಿಕ ಪ್ರಿಯಾಂಕಾ ಅವರ ಫೋನ್ ಸ್ವಿಚ್ ಆಫ್ ಆಗಿತ್ತು ಅಂತಾ ತಿಳಿದು ಬಂದಿದೆ. ಮರುದಿನ ಬೆಳಗ್ಗೆ ಹೈದ್ರಾಬಾದ್ ನ ಹೊರವಲಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಪ್ರಿಯಾಂಕಾ ಮೃತದೇಹ ಪತ್ತೆಯಾಗಿದೆ.