ಬಿಜೆಪಿ ನಾಯಕರಿಗೆ ಹೆಚ್ಡಿಕೆ ತಿರುಗೇಟು

388

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ವ್ಯಂಗ್ಯ ಮಾಡಿರುವ ಬಿಜೆಪಿ ನಾಯಕರ ವಿರುದ್ಧ ಹೆಚ್ಡಿಕೆ ತಿರುಗೇಟು ನೀಡಿದ್ದಾರೆ. ಬಡವರನ್ನ ನೋಡಿದರೆ ನಮಗೆ ಕಣ್ಣೀರು ಬರುತ್ತೆ. ಬಿಜೆಪಿಯವರ ಸಂಸ್ಕೃತಿಯೇ ಬೇರೆ ಎಂದು ಕುಟುಕಿದ್ದಾರೆ.

ಸದಾನಂದಗೌಡರು ಸತ್ತವರ ಮನೆಯಲ್ಲೂ ನಗುತ್ತಾರೆ. ಹೀಗಾಗಿ ಸತ್ತವರ ಮನೆಗೆ ಡಿವಿಎಸ್ ಕರೆದುಕೊಂಡು ಹೋಗಬೇಡಿ ಎಂದು ಕಾಲೆಳೆದ್ರು. ಇನ್ನು ಸಚಿವ ವಿ.ಸೋಮಣ್ಣನ ಮೇಲೆ ಕಿಡಿ ಕಾರಿದ ಹೆಚ್ಡಿಕೆ, ಜನತಾ ಬಜಾರ್ ನಲ್ಲಿ ಬಟ್ಟೆ ಕದ್ದು ಸಿಕ್ಕಿಬಿದ್ದವರಿಗೆ ದೇವೇಗೌಡರ ಬಗ್ಗೆ ಮಾತ್ನಾಡುವ ಯೋಗ್ಯತೆಯಿಲ್ಲ ಅಂತಾ ಹೇಳಿದ್ರು.

ದೇವೇಗೌಡರ ಮುಂದೆ ವಿ.ಸೋಮಣ್ಣ ಬಚ್ಚಾ. ಅವರು 18 ಚುನಾವಣೆಗಳಲ್ಲಿ 14ರಲ್ಲಿ ಗೆದ್ದಿದ್ದಾರೆ. 4ರಲ್ಲಿ ಸೋತಿದ್ದಾರೆ. ಅವರ ಬಗ್ಗೆ ಮಾತ್ನಾಡುವುದು ಸರಿಯಲ್ಲವೆಂದು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!