ಸಿಂದಗಿ: ಪಟ್ಟಣದಲ್ಲಿ ಇಂದು ಬೆಳಗ್ಗೆ ಲಕ್ಷಾಂತರ ಮೌಲ್ಯದ ಬಂಗಾರ ಕಳ್ಳತನ ಮಾಡಲಾಗಿದೆ. ಕಾಲೇಜ್ ರೋಡ್ ನಲ್ಲಿ ಹೊರಟಿದ್ದ ಷಣ್ಮುಖ ಸಂಗಮ ಎಂಬುವರಿಂದ ಸುಮಾರು 30.5 ಗ್ರಾಂ ತೂಕದ ಬಂಗಾರವನ್ನ ತೆಗೆದುಕೊಂಡ ಆಗುಂತಕನೊಬ್ಬ ಎಸ್ಕೇಪ್ ಆಗಿದ್ದಾನೆ.
ಎಪಿಎಂಸಿ ವ್ಯಾಪಾರಸ್ಥರು ಹಾಗೂ ಅರ್ಬನ್ ಬ್ಯಾಂಕ್ ನಿರ್ದೇಶಕರಾಗಿರುವ ಷಣ್ಮುಖ ಸಂಗಮ ಎಂಬುವರು ಬೆಳಗ್ಗೆ ಸುಮಾರು 9 ಗಂಟೆ ಟೈಂಗೆ ಕಾಲೇಜ್ ರೋಡಿನಲ್ಲಿ ನಡೆದುಕೊಂಡು ಹೊರಟಿದ್ದಾರೆ. ಈ ವೇಳೆ ಶೈನ್ ಬೈಕ್ ನಲ್ಲಿ ವಿವೇಕಾನಂದ ಸರ್ಕಲ್ ಮಾರ್ಗವಾಗಿ ಬಂದ ವ್ಯಕ್ತಿಯೊಬ್ಬ, ನಾನು ಸಿಬಿಐ ಆಫೀಸರ್ ಎಂದು ಕಾರ್ಡ್ ತೋರಿಸಿದ್ದಾನೆ. ಅವರನ್ನ ತಪಾಸಣೆ ಮಾಡಿದ್ದಾನೆ. ಬಳಿಕ ಅವರ ಕೊರಳಲ್ಲಿದ್ದ ಲಾಕೆಟ್, ಎರಡು ಉಂಗುರ ತೆಗೆದುಕೊಂಡು ಕರ್ಚಿಫ್ ನಲ್ಲಿ ಸುತ್ತಿದ್ದಾನೆ.
ಅವರೊಂದಿಗೆ ಅದು ಇದು ಮಾತ್ನಾಡಿದಂತೆ ಮಾಡಿ ಮತ್ತೊಂದು ಕರ್ಚಿಫ್ ಕೊಟ್ಟಿದ್ದಾನೆ. ಎರಡು ದಿನ ಈ ಬಂಗಾರಗಳನ್ನ ಹಾಕಿಕೊಳ್ಳಬೇಡಿ ಅಂತಾ ಹೇಳಿ ಅಲ್ಲಿಂದ ಅದೇ ಮಾರ್ಗವಾಗಿ ವಾಪಸ್ ಹೋಗಿದ್ದಾನೆ. ಷಣ್ಮುಖ ಸಂಗಮ ಅವರು ಕರ್ಚಿಫ್ ಗಂಟು ಮುಟ್ಟಿದ್ರೆ ಅದರಲ್ಲಿ ಬಂಗಾರ ಇಲ್ಲದಿರುವುದು ಗೊತ್ತಾಗಿ ಕೂಗುವಷ್ಟರಲ್ಲಿ ವೇಗವಾಗಿ ಎಸ್ಕೇಪ್ ಆಗಿದ್ದಾನೆ. ಬಂಗಾರದ ಮೌಲ್ಯದ ಅಂದಾಜು 1.23 ಲಕ್ಷವಿದೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.