ಬಸ್ ಪಾಸ್ ಇದ್ದವರಿಗೆ ಸಿಹಿ ಸುದ್ದಿ

261

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಬಸ್ ಪಾಸ್ ಇದ್ದವರು ದುಡ್ಡು ಕೊಟ್ಟು ಖಾಸಗಿ ವಾಹನಗಳಲ್ಲಿ ಸಂಚಾರ ಮಾಡ್ತಿದ್ದಾರೆ. ಇದೀಗ ಸಾರಿಗೆ ಸಂಸ್ಥೆ ಪಾಸ್ ಹೊಂದಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಭಾನುವಾರ ಸಿಹಿ ಸುದ್ದಿ ನೀಡಿದೆ.

ಮುಷ್ಕರದಿಂದ ನಿಮಗೆ ಆದ ಅನಾನುಕೂಲಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಮುಷ್ಕರದ ಅವಧಿಗೆ ಸರಿಸಮನಾಗಿ ಬಸ್ ಪಾಸ್ ಗಳ ಅವಧಿಯನ್ನ ವಿಸ್ತರಿಸಿ ಕೊಡಲಾಗುವುದು ಎಂದು ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು ಟ್ವೀಟರ್ ಮೂಲಕ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!