ಭಾನುವಾರ 2,268 ಬಸ್ ಗಳ ಸಂಚಾರ.. ಸೋಮವಾರ ಮುಷ್ಕರ ಅಂತ್ಯ?

298

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಭಾನುವಾರ ಕೆಲಸಕ್ಕೆ ಹಾಜರಾಗಿದ್ದಾರೆ. ಹೀಗಾಗಿ 25ಕ್ಕೂ ಹೆಚ್ಚು ಬಸ್ ಗಳು ಸಂಚರಿಸಿವೆ. ಸೋಮವಾರ ಇನ್ನಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆಯಿದ್ದು, ಸಾರ್ವಜನಿಕರಿಗೆ ನಿಧಾನವಾಗಿ ಅನುಕೂಲವಾಗಲಿದೆ.

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಸಂಚಾರ ಕಂಡು ಬಂದಿದೆ. 15ಕ್ಕೂ ಹೆಚ್ಚು ಜನ ಸಿಬ್ಬಂದಿ ಕೆಲಸಕ್ಕೆ ಬಂದಿದ್ದು ತಾಲೂಕಿನ ವಿವಿಧ ಕಡೆ ಬಸ್ ಸಂಚಾರ ನಡೆಸಿದ್ವು.

ಹಾಗೇ ಉತ್ತರ ಕನ್ನಡದ ಕಾರವಾರದಲ್ಲಿ 29 ಬಸ್ ಗಳು ಸಂಚಾರ ನಡೆಸಿವೆ. ಸೋಮವಾರದಿಂದ 100 ಬಸ್ ಗಳು ಸಂಚಾರ ನಡೆಸುವ ವಿಶ್ವಾಸವನ್ನ ಬಸ್ ಡಿಪೋ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಭಾನುವಾರ 2,268 ಬಸ್ ಗಳು ಸಂಚಾರ ನಡೆಸಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ವ್ಯವಸ್ಥಾಪಕ ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ. ಮೊದಲು ಎರಡು ದಿನ ಸಾರಿಗೆ ನೌಕರರು ಮೊಬೈಲ್ ಸ್ವೀಚ್ ಆಫ್ ಮಾಡಿದ್ರು. ಇದೀಗ ಆನ್ ಮಾಡಿದ್ದಾರೆ. ಅವರೊಂದಿಗೆ ಮಾತ್ನಾಡಲಾಗಿದ್ದು, ಸೋಮವಾರ ಎದ್ದಿನಂತೆ ಬಸ್ ಸಂಚರಿಸುವ ಸಾಧ್ಯತೆಯಿದೆ ಎಂದಿದ್ದಾರೆ. ಹೀಗಾಗಿ ಸೋಮವಾರ ಮುಷ್ಕರ ಅಂತ್ಯವಾಗಬಹುದಾ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!