ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ: ಗ್ರಾಮ ಪಂಚಾಯ್ತಿಯ ಚುನಾವಣೆ ಕಣ ಬಲು ಜೋರಿನಿಂದ ಕೂಡಿದೆ. ಹೀಗಾಗಿ ಸ್ಥಳೀಯ ಮಟ್ಟದಲ್ಲಿ ಭಾರೀ ಪೈಪೋಟಿ ನಡೆದಿದೆ. ಹೀಗಾಗಿ ನಾಮಪತ್ರ ಸಲ್ಲಿಕೆ ಜೋರಾಗಿದೆ. ಹೀಗೆ ನಾಮಪತ್ರ ಸಲ್ಲಿಸಲು ಬಂದವನ ಬದುಕಲ್ಲಿ ವಿಧಿಯಾಟ ಆಡಿದೆ.
ಇಳಕಲ್ ತಾಲೂಕಿನ ಕುಂದಗಲ್ ಗ್ರಾಮ ಪಂಚಾಯ್ತಿಯ 2ನೇ ವಾರ್ಡ್ ಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕಗೆ ಯಮನಪ್ಪ ದೋಟಿಹಾಳ(36) ಎಂಬಾತ ಬಂದಿದ್ದಾನೆ. ಆದ್ರೆ, ವಿಧಿ ಇವನೊಂದಿಗೆ ಆಟವಾಡಿದೆ. ಇದ್ರಿಂದಾಗಿ ಪಂಚಾಯಿತಿ ಆವರಣದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.