ಪ್ರಜಾಸ್ತ್ರ ಸುದ್ದಿ
ಚಾಮರಾಜನಗರ: ಕುಡಿದು ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿಗೆ ಮತ ಹಾಕುವಂತೆ ಕಾಡಿದ ಘಟನೆ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ. ಕುಡಿದು ವೋಟ್ ಮಾಡಲು ಬಂದಿದ್ದ ವ್ಯಕ್ತಿ ಡಿಸಿ ಎದುರು ರಂಪಾಟ ಮಾಡಿದ್ದಾನೆ.
ಮತದಾನ ಮಾಡಿ ಹೊರ ಬಂದ ವ್ಯಕ್ತಿ, ಜಿಲ್ಲಾಧಿಕಾರಿಗಳ ಕಾರು ಬರ್ತಿದ್ದಂತೆ ಅವರ ಜೀಪಿನ ಎದುರು ಮಲಗಿದ್ದಾನೆ. ಮತ ಹಾಕಬೇಕೆಂದು ಕಾಡಿದ್ದಾನೆ. ತಕ್ಷಣ ಪೊಲೀಸರು, ಗ್ರಾಮಸ್ಥರು ಅವನನ್ನ ಕರೆದುಕೊಂಡು ಹೋಗಿದ್ದಾರೆ. ಮತ್ತೆ ಬಂದು ರಂಪಾಟ ಮಾಡಿದ್ದಾಗ, ಅವನನ್ನ ಗ್ರಾಮಸ್ಥರು ಎಳೆದುಕೊಂಡು ಹೋಗಿದ್ದಾರೆ. ಮತದಾನ ಪೂರ್ವದಲ್ಲಿಯೇ ಮದ್ಯ ನಿಷೇಧವಿರುತ್ತೆ. ಹೀಗಿದ್ರೂ ಅವನಿಗೆ ಮದ್ಯ ಸಿಕ್ಕಿದ್ದು ಹೇಗೆ ಅನ್ನೋ ಪ್ರಶ್ನೆ ಎಲ್ಲರಲ್ಲಿದೆ.