ಗ್ರಾ.ಪಂ ಸದಸ್ಯನ ಹತ್ಯೆ: 6 ಜನರ ಬಂಧನ

289

ಪ್ರಜಾಸ್ತ್ರ ಅಪರಾಧ ಸುದ್ದಿ

ರಾಮನಗರ: ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆ ಪ್ರಕರಣ ಸಂಬಂಧ ಬಿಡದಿ ಪೊಲೀಸರು 6 ಜನರನ್ನ ಬಂಧಿಸಿದ್ದಾರೆ. ಬನ್ನಿಕೊಪ್ಪ ಗ್ರಾಮ ಪಂಚಾಯ್ತಿ ಸದಸ್ಯ ಕುಮಾರ ಎಂಬಾತನನ್ನ ಮೇ 4ರಂದು ಹೆಜ್ಜಾಲದ ಬಳಿ ಹತ್ಯೆ ಮಾಡಿದ್ರು. ಈ ಸಂಬಂಧ 6 ಜನರನ್ನ ಬಂಧಿಸಲಾಗಿದೆ.

ಶ್ರೀನಿವಾಸ, ಶಾಂತರಾಜು, ರಾಜೇಶ, ಸುನೀಲ, ಶ್ರೀಧರ, ಕುಮಾರ ಎಂಬುವರನ್ನ ಬಂಧಿಸಲಾಗಿದೆ. ಕೊಲೆಯಾದ ಗ್ರಾಮ ಪಂಚಾಯ್ತಿ ಸದಸ್ಯ ಕುಮಾರ ಹಾಗೂ ಈ ಪ್ರಕರಣದ ಪ್ರಮುಖ ಆರೋಪಿ ಕುಮಾರ ಚಿಕ್ಕಮ್ಮನ ಮಗನಾಗಿದ್ದಾನೆ. ಇವರ ನಡುವೆ ಹಣ ಹಾಗೂ ಜಮೀನು ವಿಚಾರವಾಗಿ ಗಲಾಟೆ ನಡೆದಿತಂತೆ. ಈ ಸಿಟ್ಟಿನಿಂದ ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿದ್ದಾನೆ.

ಕೊಲೆಯಾದ ಕುಮಾರ, ಬಿಡದಿ ಪೊಲೀಸ್ ಠಾಣೆಯಲ್ಲಿ ತನಗೆ ಜೀವ ಭಯವಿದೆ ಎಂದು ದೂರು ನೀಡಿ, ನಾಲ್ಕೈದು ಜನರ ಹೆಸರು ಬರೆದುಕೊಟ್ಟಿದ್ದನಂತೆ. ಹೀಗಾಗಿ ಪೊಲೀಸರು ಕರೆಸಿ ಎಚ್ಚರಿಕೆ ಕೊಟ್ಟಿದ್ದರು. ಇನ್ನು ಬಂಧಿತ 6 ಜನರು ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಹಾಗೂ ಕೊಲೆಗೆ ಸಂಬಂಧಿಸಿದ ಆರೋಪಗಳನ್ನ ಎದುರಿಸಿರುವುದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!