ಪಾಂಡವಪುರ: ಲಾಕ್ ಡೌನ್ ನಿಂದ ಕೂಲಿ ಕೆಲಸವಿಲ್ಲದೆ ತಾಲೂಕಿನ ರೈಲ್ವೆ ನಿಲ್ದಾಣದಲ್ಲಿ ಬೀಡು ಬಿಟ್ಟಿರುವ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ತಾಲೂಕು ಮಡಿವಾಳರ ಸಂಘದ ವತಿಯಿಂದ ನೂರಕ್ಕೂ ಹೆಚ್ಚು ನಿರಾಶ್ರಿತರಿಗೆ ಮಧ್ಯಾಹ್ನ ಊಟೋಪಚಾರ ಮಾಡಲಾಯಿತು. ಈ ಮೂಲಕ ಹಸಿದ ಹೊಟ್ಟಿಗೆ ಅನ್ನ ಹಾಕುವ ಸಾಮಾಜಮುಖಿ ಕೆಲಸ ಮಾಡಲಾಗ್ತಿದೆ.
ಕೆನ್ನಾಳು ಗ್ರಾಮ ಪಂಚಾಯತಿ ಆವರಣದಲ್ಲಿ ಕಳೆದ ಹಲವಾರು ದಿನಗಳಿಂದ ನಿರಾಶ್ರಿತರಿಗೆ ನಿತ್ಯವೂ ಎರಡು ಹೊತ್ತು ಊಟ ನೀಡಲಾಗುತ್ತಿದೆ. ಶುಕ್ರವಾರ ಇದರ ಜವಾಬ್ದಾರಿಯನ್ನು ಮಡಿವಾಳ ಸಂಘದವರು ವಹಿಸಿಕೊಂಡಿದ್ದಾರೆ. ಈ ವೇಳೆ ಗ್ರಾಮ ಪಂಚಾಯ್ತಿ ಸದಸ್ಯ ಶಿವಕುಮಾರ ಸೇರಿ ಹಲವರು ಇದ್ದರು.