ಜಮೀನು ವಿಚಾರಕ್ಕೆ ಅಣ್ಣನ ಹತ್ಯೆ

249

ಪ್ರಜಾಸ್ತ್ರ ಅಪರಾಧ ಸುದ್ದಿ

ಮಂಡ್ಯ: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಗಲಾಟೆಯಾಗಿ ಅಣ್ಣನನ್ನೇ ತಮ್ಮ ಕೊಂದ ಘಟನೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ನಡೆದಿದೆ. ಬಾಲಕೃಷ್ಣ(54) ಕೊಲೆಯಾದ ವ್ಯಕ್ತಿ, ತಮ್ಮ ಸುರೇಶ ಹತ್ಯೆ ಮಾಡಿರುವ ಆರೋಪಿ.

ಘಟನೆಯಲ್ಲಿ ಬಾಲಕೃಷ್ಣನ ಪತ್ನಿ ಸರಳಾ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರಿನಲ್ಲಿ ವಾಸವಾಗಿದ್ದ ಬಾಲಕೃಷ್ಣ, ಲಾಕ್ ಡೌನ್ ನಿಂದಾಗಿ ಊರಿಗೆ ಬಂದಿದ್ದ. ಹೀಗಾಗಿ ಒಂದೇ ಮನೆಯಲ್ಲಿ ಬೇರೆ ಬೇರೆಯಾಗಿ ವಾಸವಾಗಿದ್ರು. ಜಮೀನು ವಿಚಾರವಾಗಿ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!