ಪ್ರಜಾಸ್ತ್ರ ಸುದ್ದಿ
ಮಂಡ್ಯ: ತಾಯಿಯೊಬ್ಬಳು ತನ್ನಿಬ್ಬರು ಮಕ್ಕಳನ್ನ ಕೊಂದು ತಾನೂ ನೇಣಿಗೆ ಶರಣಾದ ಘಟನೆ ಪಾಂಡವಪುರ ತಾಲೂಕಿನ ಕುಪ್ಪಳ್ಳಿ ಅನ್ನೋ ಗ್ರಾಮದಲ್ಲಿ ನಡೆದಿದೆ. ನಿವೇದಿತಾ(26), ಗಾನವಿ(6) ಉಲ್ಲಾಸ(4) ಮೃತ ದುರ್ದೈವಿಗಳೆಂದು ತಿಳಿದಿದೆ.
ನಿವೇದಿತಾ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಕ್ಕಳಿಬ್ಬರನ್ನ ಮನೆ ಮುಂದಿನ ಮರಕ್ಕೆ ನೇಣು ಹಾಕಿ, ತಾನೂ ನೇಣು ಹಾಕಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಏನೂ ಅರಿಯದ ಪುಟ್ಟ ಮಕ್ಕಳು ತಾಯಿ ಕಠಿಣ ನಿರ್ಧಾರಕ್ಕೆ ಪ್ರಾಣ ಕಳೆದುಕೊಂಡಿವೆ.
ನಲ್ಲಹಳ್ಳಿಯ ನಿವೇದಿತಾ 7 ವರ್ಷಗಳ ಹಿಂದೆ ಕುಪ್ಪಳ್ಳಿ ಗ್ರಾಮದ ಕೃಷ್ಣೇಗೌಡ ಎಂಬಾತನನ್ನ ಮದುವೆಯಾಗಿದ್ರು. ಇವರ ಸಂಸಾರದಲ್ಲಿ ಯಾವುದೇ ಸಮಸ್ಯೆ ಇರ್ಲಿಲ್ಲವೆಂದು ಹೇಳಲಾಗ್ತಿದೆ. ಇನ್ನು ಕುಪ್ಪಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆಯೂ ಆಗಿದ್ದ ನಿವೇದಿತಾ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮಕ್ಕಳ ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣವನ್ನ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.