ಉಡುಪಿ ಕೃಷ್ಣ ಮಠದಲ್ಲಿ ಕನ್ನಡ ಕಾಣೆಯಾಗಿದೆ..

264

ಪ್ರಜಾಸ್ತ್ರ ಸುದ್ದಿ

ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಕನ್ನಡ ಕಾಣೆಯಾಗಿದೆ. ಕನ್ನಡ ಬಿಟ್ಟು ಇತರೆ ಭಾಷೆಗಳ ನಾಮಫಲಕ ಹಾಕಿರುವುದಕ್ಕೆ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ತೀವ್ರವಾಗಿ ಖಂಡಿಸಿದ್ದಾರೆ.

ಸಮಾಜಕ್ಕೆ ಮಾರ್ಗದರ್ಶನ ತೋರಿಸಿಬೇಕಾದರೆ ಕನ್ನಡ ನೆಲದಲ್ಲಿ ಈ ರೀತಿಯಾಗಿದೆ ಕುಚೋದ್ಯ ಕೆಲಸ ಮಾಡಿರುವುದು ಕ್ಷಮಿಸಲಾರದ ಅಪರಾಧವಾಗಿದೆ. ಅಲ್ದೇ, ರಾಜ್ಯ ಸರ್ಕಾರ ಕಾನೂನನ್ನ ಸ್ಪಷ್ಟವಾಗಿ ಉಲ್ಲಂಘನೆಯಾಗಿದೆ. ಕನ್ನಡ ಹಾಗೂ ತುಳು ಭಾಷೆ ನಡುವೆ ಕಂದಕ ಸೃಷ್ಟಿ ಮಾಡುವುದು ಸರಿ ಅಲ್ಲ. ಕರ್ನಾಟಕದಲ್ಲಿ ಮೊದಲು ಕನ್ನಡ. ನಾಮಫಲಕ ಬದಲು ಮಾಡುವ ತನಕ ಹೋರಾಟ ಮಾಡುತ್ತೇವೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!