ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇದರ ನಡುವೆ ಲಸಿಕೆ, ಬೆಡ್, ಆಕ್ಸಿಜನ್ ಸಮಸ್ಯೆಯೂ ತುಂಬಾ ಕಾಡುತ್ತಿದೆ. ಇದೀಗ ರಾಜ್ಯ ಕಾಂಗ್ರೆಸ್ ಲಸಿಕೆ ಖರೀದಿಗಾಗಿ 100 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ, ಜನರ ಜೀವ ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಜಾಗತಿಕ ಟೆಂಡರ್ ಮೂಲಕ ಲಸಿಕೆ ಖರೀದಿ ಮಾಡಲಾಗುವುದು ಎಂದು ಸಿಎಂ ಹಾಗೂ ಸಚಿವರು ಹೇಳಿದ್ದಾರೆ. ಲಸಿಕೆ ಖರೀದಿಗೆ ನಾವು 100 ಕೋಟಿ ನೀಡಲಿದ್ದೇವೆ ಎಂದು ಹೇಳಿದರು.
ಶಾಸಕರಿಗೂ ಹಾಗೂ ಸಂಸದರಿಗೆ ಕ್ಷೇತ್ರದ ಅಭಿವೃದ್ಧಿಗೆ ನೀಡುವ 2 ಕೋಟಿ ರೂಪಾಯಿಯಲ್ಲಿ ತಲಾ 1 ಕೋಟಿ ನೀಡಲಾಗುತ್ತೆ. ಇದಕ್ಕೆ ಕಾಂಗ್ರೆಸ್ ನ 95 ಶಾಸಕರು, 1 ಸಂಸದರು ಹಾಗೂ ರಾಜ್ಯ ಸಭಾ ಸದಸ್ಯರಿಂದ ತಲಾ 5 ಕೋಟಿ ರೂಪಾಯಿ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.