ಪ್ರಜಾಸ್ತ್ರ ಸುದ್ದಿ
ಮೈಸೂರು: ಚಾಮರಾಜನಗರ ದುರಂತಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪಾತ್ರವೇನು ಇಲ್ಲವೆಂದು ನಿವೃತ್ತ ನ್ಯಾಯಾಧೀಶರ ಸಮಿತಿ ವರದಿ ನೀಡಿದೆ. ಈ ಸಂಬಂಧ ಮಾತ್ನಾಡಿರುವ ಅವರು, ನನ್ನ ವಿರುದ್ಧ ಆರೋಪ ಮಾಡಲು ಹೋಗಿ ಮೈಸೂರಿಗೆ ಕಳಂಕ ಹೊರಿಸಿದ್ರು. ಈ ಮೈಸೂರು ಕಳಂಕ ಮುಕ್ತವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ನಾನು ಮೈಸೂರಿಗೆ ಬಂದಾಗಿನಿಂದಲೂ ಇಂತಹ ಆರೋಪಗಳನ್ನ ಕೇಳುತ್ತಿದ್ದೇನೆ. ಕಳೆದ 7 ತಿಂಗಳಿನಿಂದ ಒಬ್ಬರಲ್ಲ ಒಬ್ಬರು ನನ್ನ ವಿರುದ್ಧ ಆಪಾದನೆ ಮಾಡ್ತಿದ್ದಾರೆ. ಇದಕ್ಕೆ ನಾನು ಪ್ರತಿಕ್ರಿಯೆ ನೀಡಿಲ್ಲ. ಅದು ನನ್ನ ಕೆಲಸವಲ್ಲ. ಆದ್ರೆ, ಚಾಮರಾಜನಗರ ಪ್ರಕರಣದಲ್ಲಿ ನನ್ಗೆ ತುಂಬಾ ನೋವಾಗಿತ್ತು ಎಂದಿದ್ದಾರೆ. ಅಲ್ದೇ, ಸುಮ್ಮನೆ ನನ್ನ ವಿರುದ್ಧ ಆರೋಪ ಮಾಡಿದವರಿಗೆ ಚಾಮುಂಡೇಶ್ವರಿ ಒಳ್ಳೆಯ ಬುದ್ದಿ ಕೊಡಲಿ ಎಂದರು.