ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ್ ಯೋಜನೆ ಅಡಿಯಲ್ಲಿ ಮಂಜೂರಾದ ವಿವಿಧ ಕಾಮಗಾರಿ ಹಾಗೂ ಬಂಥನಾಳದ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಗೆ, ಶಾಸಕರ ಪರವಾಗಿ ಜೆಡಿಎಸ್ ಯುವ ನಾಯಕ ಅಶೋಕ ಮನಗೂಳಿ ಚಾಲನೆ ನೀಡಿದ್ರು.
ಬಳಗಾನೂರದಲ್ಲಿ 74 ಲಕ್ಷ ರೂಪಾಯಿ ಅನುದಾನದಲ್ಲಿ ವಿವಿಧ ಕಾಮಗಾರಿ ಮತ್ತು ಬಂಥನಾಳದಲ್ಲಿ 15 ಲಕ್ಷ ರೂಪಾಯಿ ಅನುದಾನದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದ್ರು.
ಈ ವೇಳೆ ಕೆಆರ್ಐಡಿಎಲ್ ಎಇಇ ಅಬ್ಬಾಸಲಿ ಮುಲ್ಲಾ, ಬಳಗಾನೂರ ಜಿಲ್ಲಾ ಪಂಚಾಯ್ತಿ ಸದಸ್ಯ ಬಿ ಆರ್ ಎಂಟಮಾನ, ಶಿವಶರಣಗೌಡ ಪಾಟೀಲ, ಪರಶುರಾಮ ಕಾಂಬಳೆ, ಗುಂಡುಗೌಡ ಪಾಟೀಲ, ಮಲ್ಲು ಬಾದನ, ಮಲ್ಲು ಶಂಬೇವಾಡ, ಪರಶುರಾಮ ಮಂಕಣಿ, ಕೆಂಚಪ್ಪ ಕತ್ನಳ್ಳಿ, ಗುರು ಹುಲ್ಲೂರ, ಶಿವಶಂಕರ ಕುಂಟೋಜಿ ಹಾಗೂ ಬಂಥನಾಳ ಗ್ರಾಮದ ಸಿದ್ದನಗೌಡ ಪಾಟೀಲ, ಕಾಂತನಗೌಡ ಪಾಟೀಲ, ಸಿದ್ದು ಹತ್ತಳ್ಳಿ, ಬಸನಿಂಗಪ್ಪಗೌಡ ಪಾಟೀಲ, ಚಂದ್ರಾಮ ಬಂಥನಾಳ ಇದ್ದರು.