ಪ್ರಜಾಸ್ತ್ರ ಸುದ್ದಿ
ಮಡಿಕೇರಿ: ಶಾಲಾ ಆವರಣದಲ್ಲಿ ಭಜರಂಗದಳ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದಕ್ಕೆ ಪರ ವಿರೋಧದ ಚರ್ಚೆಗಳು ನಡೆದಿವೆ. ಎಂದಿನಂತೆ ರಾಜಕೀಯ ನಾಯಕರ ಕಿತ್ತಾಟ ಶುರುವಾಗಿದೆ. ಈ ಬಗ್ಗೆ ಮಾತನಾಡಿರುವ ಶಾಸಕ ಕೆ.ಜಿ ಬೋಪಯ್ಯ, ಅವನ್ಯಾರು ಇದನ್ನು ಕೇಳೋದಕ್ಕೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಏಕವಚನ ಪ್ರಯೋಗಿಸಿದ್ದಾರೆ.
ನಾನೇನು ಗನ್ ಹಿಡಿದುಕೊಂಡು ಹೋಗಿ ಅಭ್ಯಾಸ ಮಾಡಿ, ನನ್ನ ಮನೆಯಿಂದ ತೆಗೆದುಕೊಂಡು ಹೋಗಿಲ್ಲ. ಗನ್ ಹಿಡಿಯುವುದು ನಮ್ಮ ಜನ್ಮ ಹಕ್ಕು. ಅದನ್ನು ಕೇಳೋದಕ್ಕೆ ಇವನ್ಯಾರು ಎಂದು ಕಿಡಿ ಕಾರಿದ್ದಾರೆ.