ಕರ್ನಾಟಕ ಪ್ರೌಢಶಾಲೆ ಶಿಕ್ಷಕರಿಗೆ ಗುರುವಂದನೆ

321

ಪ್ರಜಾಸ್ತ್ರ ಸುದ್ದಿ

ಧಾರವಾಡ: ನಗರದ ಕರ್ನಾಟಕ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು. ಕರ್ನಾಟಕ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ‌ನಿವೃತ್ತಿ ಹೊಂದಿದ ಮತ್ತು ‌ಪ್ರಸ್ತುತ ಶಿಕ್ಷಕರನ್ನು ಗೌರವಿಸಲಾಯಿತು.

ಗುರುವಂದನಾ ಕಾರ್ಯಕ್ರಮದಲ್ಲಿ 1993 ರಿಂದ ಈಗಿರುವ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರನ್ನು ಸನ್ಮಾನಿಸಿದರು. ಈ ವೇಳೆ  ಮಲ್ಲಿಕಾರ್ಜುನ ಮೇಣಸಿನಕಾಯಿ, ಡಾ.ಶ್ರೀಕಾಂತ ರಾಮನಗೌಡ, ಕಿರಣ ಪಾಟೀಲ, ಸಂತೋಷ ಹಿರೇಮಠ ಮತ್ತು ಕೆ.ಇ.ಬೋರ್ಡ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎ.ಆರ್.ಹದ್ಲಿ, ಶಿಕ್ಷಕರಾದ ಎನ್.ಜಿ.ಗಲಗಲಿ, ನಾಡಗೌಡ, ಮತ್ತು ಕೆ.ಇ.ಬೋರ್ಡ್ ಪ್ರೌಢಶಾಲೆಯ ಕಾರ್ಯದರ್ಶಿಗಳು ಸೇರಿದಂತೆ 1993ರ‌ ಬ್ಯಾಚಿನ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!