ಪ್ರಜಾಸ್ತ್ರ ಸುದ್ದಿ
ರಾಯಚೂರ: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಸಿಂಧನೂರು ತಾಲೂಕಿನ ಜವಳಗೇರಾ ಹತ್ತಿರ ನಡೆದಿದೆ. ಹೈದ್ರಾಬಾದ್ ಮೂಲದ ಪ್ರದೀಪ್ ಸಕ್ಸೇನಾ(30), ಪತ್ನಿ ಪೂರ್ಣಿಮಾ(30), ಮಕ್ಕಳಾದ ಜತೀನ್(12) ಹಾಗೂ ಮಾಹೀನ್(7) ಮೃತ ದುರ್ದೈವಿಗಳು.
ಗೋವಾದಿಂದ ಹೈದ್ರಾಬಾದ್ ಗೆ ಹೊರಟಿದ್ದ ಸಂದರ್ಭದಲ್ಲಿ ಕಾರಿಗೆ ಲಾರಿ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಕಾರು ಲಾರಿಯ ಒಳಗೆ ಸೇರಿಕೊಂಡಿತು. ಜೆಸಿಬಿ ಮೂಲಕ ಕಾರು ಹೊರ ತೆಗೆಯಲಾಗಿದೆ.