‘ಸಿದ್ದರಾಮಯ್ಯ ಜೈಲಿಗೆ ಹೋಗೋದು ತಪ್ಪಿಸಲು ಎಸಿಬಿ ತಂದರು’

289

ಪ್ರಜಾಸ್ತ್ರ ಸುದ್ದಿ

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಂಎಲ್ ಸಿ ಹೆಚ್.ವಿಶ್ವನಾಥ ನಡುವೆ ಟಾಕ್ ಫೈಟ್ ನಡೆದಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸಿದ್ದು ಯಾಕೆ ಎಂದು ಜನರಿಗೆ ಪ್ರಶ್ನೆ ಕೇಳಿದ್ದಾರೆ. ಅವರ ಅಹಂ, ದುರಂಹಕಾರ, ಪರರ ಬಗ್ಗೆ ಏಕವಚನದಲ್ಲಿ ಮಾತ್ನಾಡುವ ಈ ಮೂರು ವಿಚಾದಿಂದಾಗಿ ಸೋಲಿಸಿದ್ದಾರೆ ಎಂದು ಕಿಡಿ ಕಾರಿದ್ರು.

ಸದಾ ಬೆನ್ನಿಗೆ ಚೂರಿ ಇರಿಯುತ್ತಿದ್ದವರಿಗೆ ಈಗ ನೋವು ಗೊತ್ತಾಗ್ತಿದೆ. ನಿಮ್ಮದು ಮಾತ್ರ ರಕ್ತ, ಮೂಳೆ, ಮಾಂಸ. ನಮ್ದು ತಗಡು, ಮರಾನಾ ಎಂದು ವ್ಯಂಗ್ಯವಾಡಿದ್ರು. ಡಾ.ಜಿ ಪರಮೇಶ್ವರವರನ್ನ ಸೋಲಿಸಿದ್ದು ಯಾರು? ಸದಾ ಕಾನೂನು ಬಗ್ಗೆ ಮಾತ್ನಾಡುವವರು ಕೆ.ಜೆ ಜಾರ್ಜ್ ಹೆಸರಲ್ಲಿ ಮನೆ ತೆಗೆದುಕೊಂಡಿದ್ದಾರಲ್ಲ, ಅವರೆಂಥಾ ಆಸೆಬುರಕ ಎಂದು ಕಿಡಿ ಕಾರಿದ್ರು.

ಅರ್ಕಾವತಿ ಕೇಸಿನಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗ್ತಿದ್ದರು. ಹೀಗಾಗಿ ಲೋಕಾಯುಕ್ತ ಮುಚ್ಚಿ ಹಾಕಿ ಎಸಿಬಿ ಜಾರಿಗೆ ತಂದರು. ಇನ್ನು ಸಮಿಶ್ರ ಸರ್ಕಾರ ಕೆಡವಿದ್ದು ನಾವೆ ಎಂದು ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿಕೊಳ್ತಿದ್ದಾರೆ. ಅವರಿಗೆ ಧನ್ಯವಾದಗಳು. ಈ ಆಪಾದನೆಯಿಂದ ನಾವು ಮುಕ್ತವಾದ್ವಿ ಎಂದು ಹೆಚ್.ವಿಶ್ವನಾಥ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!