ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಜನವರಿ 1ರಿಂದ ಶಾಲಾ, ಕಾಲೇಜುಗಳು ಪ್ರಾರಂಭ ಮಾಡಬೇಕು ಅನ್ನೋ ವಿಚಾರ ಸಂಬಂಧ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಶಾಲೆ ಆವರಣದಲ್ಲಿ ವಾರಕ್ಕೆ 3 ದಿನ ವಿದ್ಯಾಗಮ ಮೂಲಕ ಪಾಠ ಕೇಳಲು ಸಿಎಂ ಒಪ್ಪಿಗೆ ನೀಡಿದ್ದಾರೆ.
ಬೋರ್ಡ್ ಪರೀಕ್ಷೆ ಇರುವುದ್ರಿಂದ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಕ್ಲಾಸ್ ಪ್ರಾರಂಭಿಸಲಾಗ್ತಿದೆ. 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಮೂಲಕ ಕ್ಲಾಸ್ ಕೇಳಬಹುದು. ಇದಕ್ಕೆ ಪೋಷಕರು ಒಪ್ಪಿಗೆ ಪತ್ರ ಕಡ್ಡಾಯವಾಗಿ ತರಬೇಕು. ಅನುದಾನ ರಹಿತ, ಖಾಸಗಿ ಶಾಲೆಗಳಲ್ಲಿ ಸಹ ವಿದ್ಯಾಗಮ ಶುರು ಮಾಡಬೇಕು ಎನ್ನಲಾಗಿದೆ.
ಈ ಬಗ್ಗೆ ಮಾತ್ನಾಡಿರುವ ಶಿಕ್ಷಣ ಸಚಿವ ಸುರೇಶಕುಮಾರ, ಡಿಸೆಂಬರ್ ಮುಗಿಯುವ ತನಕ ಶಾಲೆ ತೆರೆಯುವುದು ಬೇಡ ಎಂದು ತಜ್ಞರು ಹೇಳಿದ್ರು. ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಬೋರ್ಡ್ ಪರೀಕ್ಷೆ ಇರುವುದ್ರಿಂದ ಶಾಲೆಗಳನ್ನ ಜನವರಿ 1ರಿಂದ ಶುರು ಮಾಡಲಾಗ್ತಿದೆ ಎಂದರು.