ಕೊಲ್ಹಾಪುರ: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಶಿವಸೇನೆ ಕಾರ್ಯಕರ್ತರು ಮತ್ತೆ ತಮ್ಮ ಪುಂಡಾಟಿಕೆ ನಡೆಸಿದ್ದಾರೆ. ಕೊಲ್ಹಾಪುರದಲ್ಲಿ ಪ್ರತಿಭಟನೆ ನಡೆಸಿದ್ದು ಎರಡು ರಾಜ್ಯಗಳ ಮಧ್ಯ ಸಂಚಾರ ಮಾಡ್ತಿದ್ದ ಬಸ್ ಗಳನ್ನ ರದ್ದುಗೊಳಿಸಲಾಗಿದೆ.
ಇನ್ನು ಕೊಲ್ಹಾಪುರದಲ್ಲಿ ಪ್ರದರ್ಶನ ಕಾಣ್ತಿದ್ದ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ತಡೆಯೊಡಿದ್ದಾರೆ. ಥಿಯೇಟರ್ ಗೆ ಲಗ್ಗೆಯಿಟ್ಟ ಕಾರ್ಯಕರ್ತರು ಚಿತ್ರವನ್ನ ನಿಲ್ಲಿಸಿದ್ದಾರೆ. ಅಲ್ದೇ ಅಪ್ಸರಾ ಥಿಯೇಟರ್ ಬಳಿ ಮೆರವಣಿಗೆ ನಡೆಸಿ ಕನ್ನಡ ಚಿತ್ರಗಳ ಪ್ರದರ್ಶನ ನಿಲ್ಲಿಸಿದ್ದಾರೆ. ಭಾನುವಾರ ಬಸ್ ನಿಲ್ದಾಣದ ಬಳಿ ಸಿಎಂ ಬಿ.ಎಸ್ ಯಡಿಯೂರಪ್ಪನವರ ಪ್ರತಿಕೃತ ದಹನ ಮಾಡಿದ್ರು.