ಶ್ರೀನಗರ: ಚಳಿಯಿಂದಾಗಿ ಉತ್ತರ ಭಾರತ ಸಂಪೂರ್ಣವಾಗಿ ಶೇಕ್ ಆಗಿದೆ. ಜನರು ಮನೆಯಿಂದ ಹೊರ ಬರುವುದು ಇರ್ಲಿ ಮನೆಯಲ್ಲಿಯೇ ಹೇಗೆ ಇರೋದು ಅಂತಾ ವಿಚಾರ ಮಾಡುವಷ್ಟು ಶೀತ ವಾತಾವರಣ. ಇದಕ್ಕೆ ಸಾಕ್ಷಿ ಎಂಬಂತೆ ಜಮ್ಮು-ಕಾಶ್ಮೀರದ ದಾಲ್ ಸರೋವರ ಮಂಜುಗಡ್ಡೆಯಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಭಾನುವಾರದ ಹೊತ್ತಿಗೆ -6.2 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಟಾವಂಶ ದಾಖಲಾಗಿದೆ. ದಿನವಿಡಿ ಮಂಜು ಮುಸುಕಿದ ವಾತಾವರಣ ಇರೋದ್ರಿಂದ ವಾಹನ ಸಂಚಾರಕ್ಕೆ ಸಾಕಷ್ಟು ತೊಂದ್ರೆಯಾಗ್ತಿದೆ. ಹೀಗಾಗಿ ಸುಮಾರು 30 ರೈಲುಗಳ ಓಡಾಟ, ವಿಮಾನ ಹಾರಾಟವನ್ನ ಸಧ್ಯಕ್ಕೆ ಸ್ಥಗಿತಗೊಳಿಸಲಾಗಿದೆ.
ಮಂಜು ಮುಸುಕಿದ ಕಾರಣದಿಂದ ಭಾನುವಾರ ರಾತ್ರಿ ಸುಮಾರು 11.30ರ ಟೈಂನಲ್ಲಿ ದೆಹಲಿಯ ಗ್ರೇಟರ್ ನೋಯ್ಡಾ ಬಳಿ ಕಾರ್ ವೊಂದು ಕಣಿವೆಗೆ ಬಿದ್ದು 6 ಜನ ಸಾವನ್ನಪ್ಪಿದ್ದಾರೆ.