ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಯುಗಾದಿ ಹಬ್ಬದ ಮರುದಿನ ಮಾಂಸದೂಟ ಮಾಡುವುದು ರಾಜ್ಯದ ಅನೇಕ ಭಾಗಗಳಲ್ಲಿ ಸಂಪ್ರದಾಯವಾಗಿದೆ. ಹೀಗಾಗಿ ಇಂದು ಎಲ್ಲೆಡೆ ಭರ್ಜರಿಯಾಗಿ ಮಾಂಸದ ವ್ಯಾಪಾರ ನಡೆಯುತ್ತಿದೆ. ಭಾನುವಾರ ಬೇರೆ ಇರುವುದರಿಂದ ಬಾಡೂಟ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ಹಲಾಲ್ ಕಟ್, ಜಟ್ಕಾ ಕಟ್ ಬಗ್ಗೆ ಜನರು ಯಾವುದೇ ರೀತಿಯಿಂದ ತಲೆ ಕೆಡಿಸಿಕೊಂಡಿಲ್ಲ. ಎಲ್ಲಿ ಒಳ್ಳೆಯ ಮಾಂಸ ಸಿಗುತ್ತೋ ಅಲ್ಲಿ ಖರೀದಿ ಮಾಡುತ್ತಿದ್ದಾರೆ. ಈ ಮೂಲಕ ಹಿಂದೂಪರ ಸಂಘಟನೆಗಳು ನಡೆಸುತ್ತಿರುವ ಅಭಿಯಾನದ ಬಗ್ಗೆ ರಾಜ್ಯದ ಜನರು ಡೋಂಟ್ ಕೇರ್ ಅಂತಿದ್ದಾರೆ.