ಪ್ರಜಾಸ್ತ್ರ ಸುದ್ದಿ
ಚಾಮರಾಜನಗರ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಶುರುವಾಗಿದ್ದೇ ತಡ ಹೆಣ್ಮಕ್ಕಳು ಸಾರಿಗೆ ಬಸ್ ನಲ್ಲಿ ತುಂಬಿ ತುಳುಕುತ್ತಿದ್ದಾರೆ. ಇದರಿಂದಾಗಿ ಕೆಲ ವಿಚಿತ್ರ ಘಟನೆಗಳು ನಡೆಯುತ್ತಿವೆ. ಕಂಡೆಕ್ಟರ್ ಗೆ ಟಿಕೆಟ್ ನೀಡಲು ಆಗದಷ್ಟು ಜಾಗ ಸಹ ಬಿಡುತ್ತಿಲ್ಲ, ಮತ್ತೊಂದು ಕಡೆ ಡ್ರೈವರ್ ಸೀಟ್ ಕಡೆಯಿಂದಲೂ ಬಸ್ ಹತ್ತುತ್ತಿದ್ದಾರೆ. ಇನ್ನೊಂದು ಕಡೆ ಬಸ್ಸಿನ ಬಾಗಿಲನ್ನೇ ಮುರಿದಿದ್ದಾರೆ.
ಹೌದು, ಅಮವಾಸ್ಯೆ ಹಿನ್ನೆಲೆಯಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಲು ಜನ ಮುಗಿಬಿದ್ದಿದ್ದಾರೆ. ಹೀಗಾಗಿ ಬಸ್ಸಿನಲ್ಲಿ ನೂಕು ನುಗ್ಗಲಾಗಿ ಬಸ್ಸಿನ ಬಾಗಿಲು ಮುರಿದ ಘಟನೆ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ನಡೆದಿದೆ. ಜನ ಸಹ ಉಚಿತ ಪ್ರಯಾಣ ಇವತ್ತಿಗೆ ಮುಗಿದೇ ಹೋಯಿತು ಅನ್ನೋ ರೀತಿಯಲ್ಲಿ ಆಡ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ದಂಡಿ ದಂಡಿಯಾಗಿ ಭೇಟಿ ನೀಡುತ್ತಿದ್ದು, ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿರುವುದು ಮಾತ್ರ ಸತ್ಯ.