ಅಂಬೇಡ್ಕರ್, ಪೆರಿಯಾರ್ ಓದಿಕೊಳ್ಳಿ: ನಟ ವಿಜಯ್

159

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕಾಲಿವುಡ್ ಸ್ಟಾರ್ ನಟ ತಳಪತಿ ವಿಜಯ್ ರಾಜಕೀಯಕ್ಕೆ ಬರ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ಇಷ್ಟು ವರ್ಷ ಇಲ್ಲದ ಪ್ರಶ್ನೆ ಈಗ್ಯಾಕೆ ಅಂದರೆ, ನಟ ವಿಜಯ್ ಶನಿವಾರ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳು.

ನೀಲಂಗರೈಯಲ್ಲಿ ನಡೆದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ನಟ ವಿಜಯ್, ಚುನಾವಣೆ ಸಮಯದಲ್ಲಿ ಲಂಚ ಪಡೆಯದೆ ಮತ ಚಲಾಯಿಸಬೇಕು. ಪೋಷಕರನ್ನು ಸಹ ಲಂಚ ಪಡೆಯದೆ ಮತ ಚಲಾಯಿಸಲು ಒತ್ತಾಯಿಸಿ. ಅಂಬೇಡ್ಕರ್, ಪೆರಿಯಾರ್ ಓದಿಕೊಳ್ಳಿ. ಇದರಿಂದ ಬದಲಾವಣೆ ಕಾಣಬಹುದು ಎಂದರು.

ನೀವು ರಾಜಕೀಯಕ್ಕೆ ಪ್ರವೇಶಿಸುತ್ತೀರಾ ಎಂದು ಈ ವೇಳೆ ಕೇಳಿದ ಪ್ರಶ್ನೆಗೆ ಉತ್ತಿರಿಸಿದ ವಿಜಯ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ರಾಜಕೀಯ ಪ್ರವೇಶಿಸುವ ಹಕ್ಕಿದೆ ಅಂತಾ ಹೇಳಿದ್ದಾರೆ. ಈ ಒಂದು ಮಾತು ತಮಿಳುನಾಡು ರಾಜಕೀಯದಲ್ಲಿ ಸದ್ದು ಮಾಡುತ್ತಿದೆ. ಆಡಳಿತರೂಢ ಡಿಎಂಕೆ ಪಕ್ಷದ ನಾಯಕರು ನಟ ವಿಜಯ್ ಮಾತನ್ನು ಸ್ವಾಗತಿಸಿದ್ದಾರೆ. ಹೀಗಾಗಿ ವಿಜಯ್ ರಾಜಕೀಯಕ್ಕೆ ಬರ್ತಾರಾ ಅನ್ನೋ ಪ್ರಶ್ನೆ ಎದ್ದಿದೆ.




Leave a Reply

Your email address will not be published. Required fields are marked *

error: Content is protected !!