ಪ್ರಜಾಸ್ತ್ರ ಸುದ್ದಿ
ಹಾಸನ: ಅನ್ನ ಭಾಗ್ಯ ಯೋಜನೆಯ ಅಕ್ಕಿ ವಿತರಣೆ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ರಾಜ್ಯದಲ್ಲಿ ಅಕ್ಕಿ ಕಡಿಮೆ ಇರುವ ಕಾರಣ ಕೇಂದ್ರದ ಆಹಾರ ನಿಗಮ ಜೊತೆ ಚರ್ಚಿಸಿಲ್ಲ. ಯಾರ ಕೇಳಿ ಉಚಿತ ಅಕ್ಕಿ ಘೋಷಣೆ ಮಾಡಿದೀರಿ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಸಚಿವ ಕೆ.ಎನ್ ರಾಜಣ್ಣ ತಿರುಗೇಟು ನೀಡಿದ್ದು, ಪ್ರಧಾನಿ ಮೋದಿ ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಹಾಕ್ತೀನಿ ಎಂದಾಗ ಯಾರ ಅನುಮತಿ ಪಡೆದಿದ್ದರು ಅಂತಾ ಪ್ರಶ್ನಿಸಿದರು.
ಎಫ್ ಸಿಐ ಜೊತೆಗೆ ಚರ್ಚಿಸಿ ನಾವು ಘೋಷಣೆ ಮಾಡಬೇಕಿಲ್ಲ. ಅವರೇನು ಪುಕ್ಕಟೆ ಕೊಡುವುದಿಲ್ಲ. ನಾವು ಖರೀದಿಸ್ತೀವಿ. ಮೋದಿನೂ ಅನುಮತಿ ಪಡೆದು 15 ಲಕ್ಷ ರೂಪಾಯಿ ಘೋಷಣೆ ಮಾಡಿದ್ರಾ ಅಂತಾ ವಾಗ್ದಾಳಿ ನಡೆಸಿದರು.