ಪ್ರತಿ ರೈತರ ಮನೆಯಲ್ಲಿ 4-5 ಕೋಟಿ ಹೇಳಿಕೆ, ಕಾಂಗ್ರೆಸ್ ವ್ಯಂಗ್ಯ

116

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಲಂಚ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಸಿಗುತ್ತಿದ್ದಂತೆ ಎಲ್ಲರ ಎದುರು ಪ್ರತ್ಯಕ್ಷರಾಗಿ, ಅದು ನಮ್ಮ ಹಣ. ನಮ್ಮದು ಅಡಿಕೆ ತೋಟವಿದೆ, ಕ್ರಷರ್ ಇದೆ. ಅದನ್ನು ವಾಪಸ್ ಪಡೆಯುತ್ತೇವೆ. ನಮ್ಮಲ್ಲಿ ಅಡಿಕೆ ತೋಟವಿರುವ ಪ್ರತಿ ರೈತನ ಮನೆಯಲ್ಲಿ 4-5 ಕೋಟಿ ಇರುತ್ತೆ ಎಂದು ಹೇಳಿರುವ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಟ್ರೋಲ್ ಆಗುತ್ತಿದೆ.

ಇನ್ನು ಕಾಂಗ್ರೆಸ್ ಬುಧವಾರ ಟ್ವೀಟ್ ವೊಂದು ಮಾಡಿ ಪ್ರಧಾನಿ ಮೋದಿ ಸೇರಿ ಬಿಜೆಪಿಯನ್ನು ವ್ಯಂಗ್ಯ ಮಾಡಿದೆ. ಬಿಜೆಪಿ ಕರ್ನಾಟಕ ಭ್ರಷ್ಟಾಚಾರವೇ ಬಿಜೆಪಿ ಭರವಸೆ. ರಾಜ್ಯದ ರೈತರ ಮನೆಯಲ್ಲಿ 4-5 ಕೋಟಿ ಇರುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ಪ್ರಕಟಣೆ: ಮಾಡಾಳ್ ವಿರೂಪಾಕ್ಷಪ್ಪ ಎಂದು ಪೋಸ್ಟರ್ ಹಾಕಿಸಿದರೆ ಅಚ್ಚರಿ ಇಲ್ಲ ಅಂತಾ ಕಾಲೆಳೆದಿದೆ.




Leave a Reply

Your email address will not be published. Required fields are marked *

error: Content is protected !!