ನಮಗೆ ಇಂತಹದ್ದೆ ತಿನ್ನಿ ಅಂತಾ ಹೇಳಲು ನೀವ್ಯಾರು?

227

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಒಂದಾದ ಮೇಲೆ ಒಂದರಂತೆ ಕೋಮು ಸೌಹಾರ್ದತೆ ಹಾಳು ಮಾಡುವ ಘಟನೆಗಳು ನಡೆಯುತ್ತಿವೆ. ಹಲಾಲ್ ಮಾಂಸ ತಿನ್ನಬಾರದು ಎಂದು ಹಿಂದೂಪರ ಸಂಘಟನೆಗಳು ಅಭಿಯಾನ ನಡೆಸಿದ್ದಾರೆ. ಇದರ ವಿರುದ್ಧ ಇದೀಗ ಪ್ರಗತಿಪರರು, ಬುದ್ದಿಜೀವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಲಾಲ್ ವಿರುದ್ಧದ ಅಭಿಯಾನದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿಯೂ ವಾಗ್ವಾದ ಶುರುವಾಗಿದೆ. ನಮಗೆ ಇಂತಹದ್ದೆ ತಿನ್ನಿ ಅಂತಾ ಹೇಳಲು ನೀವ್ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ಸಸ್ಯಹಾರಿಗಳಿಗೇನು ಕೆಲಸ ಇದರಲ್ಲಿ. ಅಂದು ಶಾಲೆಯಲ್ಲಿ ಮೊಟ್ಟೆ ಬೇಡ. ಅದು ಮಾಂಸಹಾರ ಅಂದವರು, ಇಂದು ಇಂತಹದ್ದೆ ಮಾಂಸ ತಿನ್ನಿ ಅಂತಾ ಹೇಳಲು ನೀವ್ಯಾರು ಅಂತಿದ್ದಾರೆ.

ನಮ್ಮ ದುಡಿಮೆಯಲ್ಲಿ ನಮಗೆ ಏನು ತಿನ್ನಬೇಕು ಅನಿಸುತ್ತೋ ಅದನ್ನು ತಿನ್ನುತ್ತೇವೆ. ನಮ್ಮ ತಟ್ಟೆಯಲ್ಲಿ ಏನು ಇರಬೇಕು, ಏನು ಇರಬಾರದು ಎಂದು ಹೇಳಲು ಹಿಂದೂಪರ ಸಂಘಟನೆಗಳು, ಸ್ವಾಮೀಜಿಗಳು ಯಾರು ಅಂತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!