ಪ್ರಜಾಸ್ತ್ರ ಸುದ್ದಿ
ಗುವಾಹಟಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಎರಡನೇ ಬಾರಿಗೆ ಅಸ್ಸಾಂ ಪ್ರವೇಶಿಸಿದೆ. ಗುರುವಾರದಿಂದ ಶನಿವಾರದ ತನಕ ಅಸ್ಸಾಂನಲ್ಲಿ ಮೊದಲ ಹಂತದ ಕಾಲ್ನಡಿಗೆ ಯಾತ್ರೆ ನಡೆದಿತ್ತು.
ಶನಿವಾರ ಅರುಣಾಚಲ ಪ್ರದೇಶದಲ್ಲಿ ವಾಸ್ತವ್ಯ ಹೂಡಲಾಗಿತ್ತು. ಇಂದು ಎರಡನೇ ಬಾರಿಗೆ ಬಿಸ್ವನಾಥ್ ಜಿಲ್ಲೆಯ ರಾಜಗಢದ ಮೂಲಕ ಅಸ್ಸಾಂ ಪ್ರವೇಶಿಸಿದೆ. ನಾಗಾಂವ್ ನ ಕಲಿಯುಬೋರ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ.