ಅಸ್ಸಾಂ ಸಿಎಂ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ: ರಾಹುಲ್ ಗಾಂಧಿ

156

ಪ್ರಜಾಸ್ತ್ರ ಸುದ್ದಿ

ಗುವಾಹಟಿ: ಕಾಂಗ್ರೆಸ್ ಸಂಸದ ರಾಹುಲ್ ನಾಯಕತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಅಸ್ಸಾಂನಲ್ಲಿ ಸಾಗುತ್ತಿದೆ. ಇಲ್ಲಿನ ಸರ್ಕಾರದಿಂದ ಯಾತ್ರೆಗೆ ತೊಂದರೆ ಕೊಡುವ ಕೆಲಸಗಳು ನಿರಂತರ ನಡೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಲ್ಲು ತೂರಾಟ, ದೇವಸ್ಥಾನ ಪ್ರವೇಶ ನಿರಾಕರಣೆ, ಪ್ರತಿಭಟನೆ ನಡೆದಿವೆ. ಇಂದು ಹಜೋದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಅಸ್ಸಾ ಸಿಎಂ ಹೇಮಂತ್ ಬಿಸ್ವ ಶರ್ಮಾ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂದು ಆರೋಪಿಸಿದರು.

ತರುಣ್ ಗೊಗೊಯಿ ಸಿಎಂ ಆಗಿದ್ದಾಗ ಅಸ್ಸಾಂ ಅಭಿವೃದ್ಧಿಗೆ ಕಾರಣರಾದರು. ಅವರ ಆಡಳಿತದಲ್ಲಿ ಏನು ಮಾಡಬೇಕು ಎಂದು ನಾವು ಎಂದಿಗೂ ಹೇಳಿಲ್ಲ. ಈಗಿನ ಸಿಎಂ ಶರ್ಮಾರನ್ನು ಅಮಿತ್ ಶಾ ನಿಯಂತ್ರಿಸುತ್ತಿದ್ದಾರೆ. ನಿಮ್ಮ ಅಡಿಕೆ ಕದ್ದಿದ್ದಾರೆ. ನಿಮ್ಮ ಜೇಬಿನಿಂದ ಹಣ ಕದ್ದಿದ್ದಾರೆ. ಕಾಜಿರಂಗ ರಾಷ್ಟ್ರೀಯ ಪಾರ್ಕ್ ನಲ್ಲಿ ಭೂಮಿ ಕದ್ದಿದ್ದಾರೆ ಎಂದು ಆರೋಪಿಸಿದರು.




Leave a Reply

Your email address will not be published. Required fields are marked *

error: Content is protected !!