ರೈತ ಸಂಘದಿಂದ ದರ್ಶನಗೆ ವಿಶೇಷ ಬಿರುದು

152

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕಾಟೇರ ಸಿನಿಮಾ ಹೊಸ ಮೈಲುಗಲ್ಲು ಸಾಧಿಸಿದೆ. ನಟ ದರ್ಶನ್-ಆರಾಧಾನ ಜೋಡಿಯ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ಜೊತೆಗೆ ಎಲ್ಲೆಡೆ ಹೊಸ ಅಲೆ ಎಬ್ಬಿಸಿದೆ. ಕಾರಣ ಉಳುವವನೆ ಭೂಮಿ ಒಡೆಯ ಕಾನೂನು ಕೇಂದ್ರಿತ ಸಿನಿಮಾ ಜಾತಿ ವ್ಯವಸ್ಥೆಯ ಸಮಾಜದ ಹಲವು ಮುಖುಗಳನ್ನು ಅನಾವರಣ ಮಾಡಿದೆ. ಹೀಗಾಗಿ ವ್ಯಾಪಕ ಚರ್ಚೆಯ ಜೊತೆಗೆ ಹಲವು ರೆಕಾರ್ಡ್ ಗಳನ್ನು ಮಾಡಿದೆ.

ರೈತರ ಕುರಿತಾಗಿ ಬಂದ ಕಾಟೇರ ಸಿನಿಮಾ ಯಶಸ್ಸಿಗೆ ಇದೀಗ ಮತ್ತೊಂದು ಗರಿ ಸಿಗುತ್ತಿದೆ. ಅದುವೇ ಡಿ ಬಾಸ್ ದರ್ಶನಗೆ ಕರ್ನಾಟಕ ರಾಜ್ಯ ರೈತ ಸಂಘದಿಂದ ‘ಅನ್ನದಾತ ಆಪ್ತ ಕಾಟೇರ’ ಎನ್ನುವ ಬಿರುದು ನೀಡಲಾಗುತ್ತಿದೆ. ರೈತ ಸಂಘದ ನಾಯಕ ದಿವಂಗತ ಕೆ.ಎಸ್ ಪುಟ್ಟಣಯ್ಯನವರ 75ನೇ ಜನ್ಮದಿನೋತ್ಸವ ಪ್ರಯುಕ್ತ ಜನವರಿ 26ರಂದು ಪಾಂಡಪುರದಲ್ಲಿ ದೊಡ್ಡ ಕಾರ್ಯಕ್ರಮ ನಡೆಯುತ್ತಿದೆ.

ಶಾಸಕ ದರ್ಶನ್ ಪುಟ್ಟಣಯ್ಯ, ನಟ ದರ್ಶನ್ ಸೇರಿ ಕಾಟೇರ ಚಿತ್ರತಂಡದ ಅದ್ಧೂರಿ ಮೆರವಣಿಗೆ ನಡೆಯಲಿದೆ. 25 ಸಾವಿರಕ್ಕೂ ಹೆಚ್ಚಿನ ಜನರ ಸಮ್ಮುಖದಲ್ಲಿ ಸಂಜೆ 6.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಡ್ಯಾನ್ಸ್, ಹಾಡು ಸೇರಿ ಭರ್ಜರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.




Leave a Reply

Your email address will not be published. Required fields are marked *

error: Content is protected !!