ರಾಮ ಮಂದಿರ ಉದ್ಘಾಟನೆ: ರಜೆ ನೀಡಲು ಬಿಜೆಪಿ ನಾಯಕರ ಒತ್ತಾಯ

87

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿದೆ. ಹೀಗಾಗಿ ದೇಶದ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ರಜೆ ಘೋಷಿಸಲಾಗಿದೆ. ಇದೇ ರೀತಿ ಕರ್ನಾಟಕದಲ್ಲಿ ರಜೆ ನೀಡಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.

ಮಾಜಿ ಸಿಎಂ ಡಿ.ವಿ ಸದಾನಂದಗೌಡ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಗೋವಿಂದ್ ಕಾರಜೋಳ ಮಾತನಾಡಿ, ಸ್ವಪಕ್ಷೀಯರ ಮಾತು ಕೇಳದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಜೆ ಘೋಷಿಸಬೇಕು. ರಾಮ ಮಂದಿರ ನಿರ್ಮಾಣದಿಂದ ಸಿದ್ದರಾಮಯ್ಯನವರು ವಿಚಲಿತರಾಗಿದ್ದಾರೆ ಅಂತಾ ವಾಗ್ದಾಳಿ ನಡೆಸಿದರು.

ಆರ್.ಅಶೋಕ್ ಮಾತನಾಡಿ, ನಾಳೆ ರಜೆ ಕೊಡಿ ಎಂದು ಬಿಜೆಪಿಯವರು ಮಾತ್ರ ಕೇಳುತ್ತಿಲ್ಲ. ರಾಜ್ಯದ 7 ಕೋಟಿ ಜನರೂ ಕೇಳುತ್ತಿದ್ದಾರೆ. ರಾಮನ ಮೇಲೆ ಸಾಸಿವೆ ಕಾಳಿನಷ್ಟಾದರೂ ಪ್ರೀತಿ ಇದ್ದರೆ ರಜೆ ಕೊಡಲಿ ಎಂದರು.




Leave a Reply

Your email address will not be published. Required fields are marked *

error: Content is protected !!