ವಿಜಯಪುರ: ಆಲಮಟ್ಟಿ ಡ್ಯಾಂನಲ್ಲಿರುವ ನೀರನ್ನ, ಎಂ.ಬಿ ಪಾಟೀಲ್ ನೀರಾವರಿ ಸಚಿವರಾಗಿದ್ದಾಗ ಖಾಲಿಯಾಗಿದೆ ಅನ್ನೋ ಹೇಳಿಕೆಗೆ ಇದೀಗ ಸಚಿವ ಶಿವಾನಂದ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಎಂ.ಬಿ ಪಾಟೀಲ್ ಕಾಲದಲ್ಲಿ ನೀರು ಖಾಲಿಯಾಗಿದೆ ಅಂತಾ ನಾನು ಹೇಳಿಲ್ಲ. ಎಂ.ಬಿ ಪಾಟೀಲ್ ಉಸ್ತುವಾರಿ ನೋಡಿಕೊಳ್ಳುತ್ತಿರುವಾಗ ಡ್ಯಾಂ ನೀರು ಸಂಪೂರ್ಣ ಖಾಲಿಯಾಗಿತ್ತು. ಈ ವರ್ಷ ಡ್ಯಾಂನಲ್ಲಿ ನೀರು ಉಳಿಸಿ ಆಲಮಟ್ಟಿಯಿಂದ ತೆಲಂಗಾಣಕ್ಕೆ ನೀರು ಕೊಟ್ಟರೂ ಉಳಿಸಿದ್ದೇವೆ ಅಂತಾ ಹೇಳಿದ್ದೇನೆ. ಹೀಗಾಗಿ ನೀರಿಗೆ ಬರಗಾಲ ಇಲ್ಲ ಅಂತಾ ನಾನು ಹೇಳಿದ್ದೇನೆ ಅಂತಾ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಇದನ್ನ ಅಪಾರ್ಥ ಮಾಡಿಕೊಂಡು ಎಂ.ಬಿ ಪಾಟೀಲ್ ಮಾತ್ನಾಡಿದ್ದು ಸರಿಯಲ್ಲ. ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತರಲು, ಇದಕ್ಕೂ ಅದಕ್ಕೂ ಏನು ಸಂಬಂಧ ಅಂತಾ ಆರೋಗ್ಯ ಸಚಿವರು ಕೇಳಿದ್ದಾರೆ.