ವಿಜಯಪುರ: ಎಂ.ಬಿ ಪಾಟೀಲ್ ಅವರು ನೀರಾವರಿ ಸಚಿವರಾಗಿದ್ದಾಗ ಆಲಮಟ್ಟಿ ಡ್ಯಾಂ ನೀರನ್ನ ಖಾಲಿ ಮಾಡಿದ್ದಾರೆ ಅನ್ನೋ ಸಚಿವ ಶಿವನಾಂದ ಪಾಟೀಲ್ ಅವರ ಹೇಳಿಕೆಗೆ ಗರಂ ಆಗಿದ್ದಾರೆ. ವಿಜಯಪುರದಲ್ಲಿ ಮಾತ್ನಾಡಿದ ಗೃಹ ಸಚಿವ ಎಂ.ಬಿ ಪಾಟೀಲ್, ಆರೋಗ್ಯ ಸಚಿವ ಶಿವಾನಂದ ಪಾಟೀಲ್ ರಿಗೆ ಹೊಟ್ಟೆ ಉರಿ ಜಾಸ್ತಿ ಇದೆ ಅಂತಾ ಹೇಳಿದ್ದಾರೆ.
ಶಿವಾನಂದ ಪಾಟೀಲ್ ಕೊಳಕು ಮಾತ್ನಾಡ್ತಾರೆ. ಅವರು ಅಸೂಯೆ ಪಡುವ ಜನರು. ಅಲ್ದೇ ನಮ್ಮದೆ ಪಕ್ಷದವರಾಗಿ ಏನೂ ತಿಳಿಯದೇ ಮಾತ್ನಾಡುವುದು ಸರಿಯಲ್ಲ. ಈ ವಿಷಯವನ್ನ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಅವರ ಗಮನಕ್ಕೆ ತಂದಿದ್ದೇನೆ ಅಂತಾ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ.