ಪ್ರಜಾಸ್ತ್ರ ಸುದ್ದಿ
ಮುದ್ದೇಬಿಹಾಳ: ಭಾರೀ ಮಳೆ ಸುರಿದ ಕಾರಣಕ್ಕೆ ನೆನೆದಿದ್ದ ಮನೆ ಮೇಲ್ಚಾವಣಿ ಕುಸಿದ ಘಟನೆ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ. ಇದ್ರಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳೆಲ್ಲ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಿಹಾನಿ ಸಂಭವಿಸಿಲ್ಲ.
ಬಸವರಾಜ ಹಾದಿಮನಿ ಎಂಬುವರಿಗೆ ಸೇರಿದ ಮನೆ ಕುಸಿದಿದೆ. ಕೂದಲು ಎಳೆಯಲ್ಲಿ ಅನ್ನಪೂರ್ಣ ಹಾದಿಮನಿ ಎಂಬುವರು ಪಾರಾಗಿದ್ದಾರೆ. ಅವರು ಅಡುಗೆ ಮನೆಯಿಂದ ಹೊರ ಬರುವ ವೇಳೆ ಏಕಾಏಕಿ ಮೇಲ್ಚಾವಣಿ ಕುಸಿದಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.