ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ: ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಗುಡುಗು, ಸಿಡಿಲು ಸಮೇತ ಭರ್ಜರಿ ಮಳೆಯಾಗಿದೆ. ಈ ವೇಳೆ ಮನೆಯೊಂದರ ಮೇಲ್ಛಾವಣಿ ಕುಸಿದು ಮಹಿಳೆಯರಿಬ್ಬರು ಸಾವನ್ನಪ್ಪಿದ ಘಟನೆ, ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ನಡೆದಿದೆ.
ಯಂಕುಬಾಯಿ ಕುಲಕರ್ಣಿ(79) ಹಾಗೂ ಶಾರದಾ ಪತ್ತಾರ(61) ಮೃತ ದುರ್ದೈವಿಗಳು. ಭಾರೀ ಮಳೆ, ಸಿಡಿಲಿಯಿಂದ ಮನೆಯ ಮೇಲ್ಛಾವಣಿ ಕುಸಿದಿದೆ. ಇದರಿಂದಾಗಿ ಈ ದುರ್ಘಟನೆ ನಡೆದಿದೆ. ಶಾರದಾ ಪತ್ತಾರ ಅವರದ್ದು ಬೇರೆ ಮನೆ ಇದೆ. ಆದರೆ, ಯಂಕುಬಾಯಿ ಅವರ ಜೊತೆಗೆ ದಿನಾ ಅವರ ಮನೆಯಲ್ಲಿ ಮಲಗುತ್ತಿದ್ದಂತೆ ಗುರುವಾರವೂ ಮಲಗಿದ್ದಾರೆ. ಅದೆ ಅವರ ಸಾವಿಗೆ ಕಾರಣವಾಗಿದೆ.
ಇನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಿಸಲು ನೋಡಿದ್ದಾರೆ. ಆದರೆ, ಅದಾಗ್ಲೇ ಅವರು ಮೃತಪಟ್ಟಿದ್ದರು. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.