ಬೆಂಗಳೂರಲ್ಲಿ ಮಳೆ ಅವಾಂತರ

195

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಳೆಗಾಲ ಶುರುವಾದಗಲೇ ಸಿಲಿಕಾನ್ ಸಿಟಿಯಲ್ಲಿನ ಸಮಸ್ಯೆ ಬಗ್ಗೆ ರಾಜಕಾರಣಿಗಳು, ಅಧಿಕಾರಿಗಳು ಕೆಲಸಕ್ಕೆ ಮುಂದಾಗುವುದು. ಅದಕ್ಕೂ ಮುಂಚೆ ಯಾವ ಸಿದ್ಧತೆ ಮಾಡಿಕೊಳ್ಳುವುದಿಲ್ಲ. ಸಮಸ್ಯೆಗೆ ಪರಿಹಾರವನ್ನು ಕಲ್ಪಿಸಿರುವುದಿಲ್ಲ. ಹೀಗಾಗಿ ಮಳೆಗಾಲದ ಅವಾಂತರ ಸೃಷ್ಟಿಯಾಗಿದೆ.

ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬೊಮ್ಮಾಯಿ, ನಗರದ ಹಲವು ಭಾಗಗಳಲ್ಲಿ ನೀರು ನುಗ್ಗಿವೆ. ಪಾಲಿಕೆ ಆಯುಕ್ತರು, ಇಂಜಿನಿಯರ್ ಗಳ ಜೊತೆ ಮಾತನಾಡಿ ಟಸ್ಕ್ ಪೋರ್ಸ್ ಕಳಿಸಲು ಹೇಳಿದ್ದೇನೆ. ಹೋಂ ಗಾರ್ಡ್ ಎಸ್ ಡಿಆರ್ ಎಫ್ ಕಾರ್ಯಾಚರಣೆ ನಡೆಸಿವೆ ಎಂದರು.

ಬೆಂಗಳೂರಿನಲ್ಲಿ ಬರೋಬ್ಬರಿ 100 ಮಿಲಿ ಮೀಟರ್ ಮಳೆಯಾಗಿದೆ. ಇನ್ನು ಎರಡ್ಮೂರು ದಿನ ಭರ್ಜರಿ ಮಳೆಯಾಗಲಿದೆಯಂತೆ. ನಗರದ ಮೂರ್ನಾಲ್ಕು ಕಡೆ ನಾನೇ ಖುದ್ದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!