ವರುಣನ ಆರ್ಭಟಕ್ಕೆ ಬೆಂಗಳೂರು ತತ್ತರ

102

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಚಂಡಮಾರುತದಿಂದಾಗಿ ದಕ್ಷಿಣ ವಲಯ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಮಳೆಯಾಗುತ್ತಿದೆ. ಸೋಮವಾರ ಸಂಜೆ ಸುರಿದ ಮಳೆ ಜನರನ್ನು ಸಾಕಷ್ಟು ಹೈರಾಣು ಮಾಡಿದೆ. ಅನೇಕ ಕಡೆ ಸಾಕಷ್ಟು ಹಾನಿಯಾಗಿದೆ.

ವೀರಭದ್ರೇಶ್ವರ ನಗರದಲ್ಲಿರುವ ಗೋಪಾಲ್ ಎಂಬುವರಿಗೆ ಸೇರಿದ ಮನೆ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲ ಇದಿರುವ ಕಾರಣ ಯಾವುದೇ ಜೀವಹಾನಿ ಆಗಿಲ್ಲ.

ಇನ್ನು ಅಪಾರ್ಟ್ ಮೆಂಟ್ ವೊಂದರ ತಡೆಗೋಡೆ ಕುಸಿದು ಬಿದ್ದು ಎರಡು ಕಾರುಗಳು ಸಂಪೂರ್ಣ ಜಖಂಗೊಂಡಿವೆ. ಹೊಸಕೆರೆಹಳ್ಳಿಯ ಪುಪ್ಪಗಿರಿಯಲ್ಲಿನ ಹಲವು ಮನೆಗಳಿಗೆ ನೀರು ನುಗ್ಗಿವೆ. ಪಾಲಿಕೆ ವಿರುದ್ಧ ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ. ಬಾಪೂಜಿ ನಗರ, ಶಾಂತಿನಗರ, ಬ್ಯಾಂಕ್ ಕಾಲೋನಿ, ರಿಚ್ಮಂಡ್ ರಸ್ತೆ, ಮೈಸೂರು ರಸ್ತೆ, ನಾಯಂಡಹಳ್ಳಿ ಸೇರಿ ಅರ್ಧ ಬೆಂಗಳೂರಿನ ಜನತೆ ವರುಣನ ಆರ್ಭಟಕ್ಕೆ ಕಂಗಾಲಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!