ಬಸ್ ಅಪಘಾತದಲ್ಲಿ 15 ಪ್ರಯಾಣಿಕರ ದುರ್ಮರಣ

123

ಪ್ರಜಾಸ್ತ್ರ ಸದ್ದಿ

ಖಾರ್ಗೋನ್: ಖಾಸಗಿ ಬಸ್ ಅಪಘಾತಗೊಂಡು 15 ಪ್ರಯಾಣಿಕರು ಜೀವ ಕಳೆದುಕೊಂಡಿರುವ ದುರಂತ ಮಧ್ಯಪ್ರದೇಶದಲ್ಲಿ ಖಾರ್ಗೋನ್ ನಲ್ಲಿ ನಡೆದಿದೆ. 25ಕ್ಕೂ ಹೆಚ್ಚು ಜನರು ಗಾಯಗೊಂಡದ್ದಾರೆ.

20 ಅಡಿ ಎತ್ತರದ ಸೇತುವೆಯಿಂದ ಕೆಳಗೆ ಬಿದ್ದಿದೆ. ಇಂದೋರ್ ಗೆ ಬಸ್ ಪ್ರಯಾಣ ಬೆಳಸಿತ್ತು. ಈ ವೇಳೆ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಶಿವರಾಜ್ ಸಿಂಗ್, ಕಾರ್ಗೋನ್ ಶಾಸಕ ರವಿ ಜೋಶಿ ಸ್ಥಳಕ್ಕೆ ತೆರಳಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಕೇರಳದಲ್ಲಿ ದೋಣಿ ದುರಂತ ಸಂಭವಿಸಿ 22 ಜನರು ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಮಧ್ಯಪ್ರದೇಶದ ಸರ್ಕಾರ ಮೃತರ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಗಂಭೀರ ಗಾಯಾಳುಗಳುಗಳಿಗೆ 50 ಸಾವಿರ, ಸಣ್ಣಪುಟ್ಟ ಗಾಯಾಳುಗಳಿಗೆ 25 ಸಾವಿರ ರೂಪಾಯಿ ಘೋಷಿಸಿದೆ.




Leave a Reply

Your email address will not be published. Required fields are marked *

error: Content is protected !!