ಬೆಳಗಾವಿ: ಇತ್ತೀಚೆಗಷ್ಟೇ ಪ್ರವಾಹದಿಂದ ತತ್ತರಿಸಿ ಹೋಗಿರುವ ಕುಂದಾನಗರಿಗೆ ಹಿಂಗಾರು ಮಳೆಯ ಆರ್ಭಟ ಶುರುವಾಗಿದೆ. ಶನಿವಾರ ರಾತ್ರಿಯಿಡಿ ಸುರಿದ ಮಳೆಗೆ ಜಿಲ್ಲೆಯ ಸವದತ್ತಿ-ಧಾರವಾಡ ನಡುವಿನ ರಾಷ್ಟ್ರೀಯ ಹೆದ್ದಾರಿ ಸ್ಥಗಿತಗೊಂಡಿದೆ.
ಇನ್ನು ಮಳೆಯಿಂದಾಗಿ ತುಪರಿ ಹಳ್ಳದ ನೀರು ರಭಸದಿಂದ ಹರಿಯುತ್ತಿರುವ ಕಾರಣಕ್ಕೆ, ಇನಾಮಹೊಂಗಲ ಬಳಿ ನಿರ್ಮಿಸ್ತಿರುವ ಸೇತುವೆ ಕಾಮಗಾರಿಯನ್ನ ಸ್ಥಗಿತಗೊಳಿಸಲಾಗಿದೆ. ಅಲ್ದೇ, ತಾತ್ಕಾಲಿಕ ಸಂಚಾರ ಬಂದ್ ಸಹ ಮಾಡಲಾಗಿದೆ.
ಧಾರವಾಡದಿಂದ ಸವದತ್ತಿ ತಲುಪಬೇಕಾದ ಬಸ್ ಗಳು, ಉಪ್ಪಿನ ಬೆಟಗೇರಿ, ಸುತಗಟ್ಟಿ, ದೊಡವಾಡ, ಮಾರ್ಗವಾಗಿ ಬೆಳವಾಡಿ ಸವದತ್ತಿ ರೋಡ್ ಸೇರುತ್ತಿವೆ. ಕರಿಕಟ್ಟಿ ಗ್ರಾಮದ ಕಿರುಸೇತುವೆ ಕುಸಿದ ಪರಿಣಾಮ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.