ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯ ಹಲವು ತಾಲೂಕುಗಳಲ್ಲಿ ಕಳೆದ ರಾತ್ರಿ ಭರ್ಜರಿಯಾಗಿ ಮಳೆಯಾಗಿದೆ. ಇದರಿಂದಾಗಿ ಅನೇಕ ಸಾಕಷ್ಟು ಹಾನಿಯಾಗಿದೆ. ಮನೆಗಳಿಗೆ ನೀರು ನುಗ್ಗಿವೆ. ಹೊಲಗಳಲ್ಲಿ ನೀರು ನಿಂತಿವೆ. ಇದರಿಂದಾಗಿ ಬೆಳೆಗಳು ಹಾಳಾಗುತ್ತಿವೆ.
ಆಗಾಗ ಬರುತ್ತಿರುವ ಅಕಾಲಿಕ ಮಳೆ ರಾತ್ರಿ ವೇಳೆಯಲ್ಲೇ ಹೆಚ್ಚಾಗಿದೆ. ಬಿಸಿಲಿನಿಂದ ಸಾಕಷ್ಟು ಹೈರಾಣಾಗುತ್ತಿರುವ ಜನರು ಮಳೆ ಬರುವುದಾದರೆ ಹಗಲು ಹೊತ್ತಿನಲ್ಲೇ ಬರಲಿ ಅಂತಿದ್ದಾರೆ. ಇನ್ನು ಈ ಅಕಾಲಿಕ ಮಳೆಗೆ ಪಶ್ಚಿಮ ಬಂಗಾಳ ಹಾಗೂ ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿ ಕಾರಣವಾಗಿದೆ.
ಇಂದು ರಾಜ್ಯದ ಅನೇಕ ಕಡೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದ್ದು, ಇನ್ನು ಮೂರು ದಿನಗಳ ಕಾಲ ಮಳೆ ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.