ವಿಜಯಪುರ ಜಿಲ್ಲೆಯಾದ್ಯಂತ ಭರ್ಜರಿ ಮಳೆ

398

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಗುಮ್ಮಟನಗರಿಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಭರ್ಜರಿ ಮಳೆಯಾಗ್ತಿದೆ. ಜಿಲ್ಲಾಯಾದ್ಯಂತ ಮುಂಜಾನೆ ಹಾಗೂ ಸಂಜೆ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯವಸ್ಥಗೊಂಡಿದೆ. ಅನೇಕ ಕಡೆ ನೀರು ನುಗ್ಗಿ ಜನರು ಪರದಾಡ್ತಿದ್ದಾರೆ.

ಜಿಲ್ಲೆಯ ಮುಧೋಳ, ಸಿಂದಗಿ, ದೇವರಹಿಪ್ಪರಗಿ, ಇಂಡಿ, ತಿಕೋಟ, ಬಬಲೇಶ್ವರ ಸೇರಿದಂತೆ ಜಿಲ್ಲೆಯ ತುಂಬಾ ವರುಣನ ಆರ್ಭಟ ಮುಂದುವರೆದಿದೆ. ಇದ್ರಿಂದಾಗಿ ರೈತಾಪಿ ವರ್ಗ ಸೇರಿದಂತೆ ದಿನಗೂಲಿ ಮಾಡಿಕೊಂಡು ಜೀವನ ಮಾಡುವವರು ಕಂಗಾಲಾಗಿದ್ದಾರೆ.

ಸೋಮವಾರ ಸಂಜೆ ಸಹ ಸಿಂದಗಿ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗ್ತಿದೆ. ಬೆಳಗ್ಗೆಯಿಂದಲೇ ಜಿಟಿಜಿಟಿ ಶುರುವಾಗಿದ್ದ ಮಳೆ ಸಾಯಂಕಾಲದ ಹೊತ್ತಿಗೆ ಜೋರಾಗಿ ಸುರಿಯುತ್ತಿದೆ. ಸತತವಾಗಿ ಬರುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿವೆ. ಚರಂಡಿಗಳು ತುಂಬಿ ರಸ್ತೆ ಮೇಲೆಲ್ಲ ಹರಿದು ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ಸಾರ್ವಜನಿಕರು ಸ್ಥಳೀಯ ಆಡಳಿತಕ್ಕೆ ಹಿಡಿ ಶಾಪ ಹಾಕ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!