ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೃಷಿ ಸಚಿವ ಬಿ.ಸಿ ಪಾಟೀಲ ರೈತರನ್ನ ಹೇಡಿ ಎಂದಿರುವ ವಿಚಾರ ವಿವಾದ ಹುಟ್ಟು ಹಾಕಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಈ ಬಗ್ಗೆ ಮತ್ತೆ ಮಾತ್ನಾಡಿರುವ ಸಚಿವರು, ನಾನು ರೈತರನ್ನ ಹೇಡಿ ಅಂದಿಲ್ಲ. ಆತ್ಮಹತ್ಯೆ ಕೆಲಸ ಹೇಡಿತನದ್ದು ಎಂದಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ರೈತರು ಕಷ್ಟಗಳನ್ನ ಈಜಿ ಜಯಿಸಬೇಕು. ಕತ್ತಲಾದ್ಮೇಲೆ ಬೆಳಕು ಬರುತ್ತೆ. ಕೋಲಾರ ರೈತರು ಸಮಗ್ರ ಕೃಷಿ ನೀತಿ ಅಳವಡಿಸಿಕೊಂಡು ಇತರ ರೈತರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದ್ದೇನೆ. ಇದನ್ನ ಹೊರತು ಪಡಿಸಿ ರೈತರನ್ನ ಹೇಡಿ ಎಂದು ಸಂಭೋದಿಸಿಲ್ಲ ಅಂತಾ ಹೇಳಿದ್ದಾರೆ.