ಸರ್ಕಾರದೊಂದಗಿನ ಸಭೆಯಲ್ಲಿ ತಮ್ಮದೆ ಚಾ, ಊಟ ಸವಿದ ಸ್ವಾಭಿಮಾನಿ ರೈತರು

302

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೃಷಿ ಮಸೂದೆ ವಿರೋಧ ದೆಹಲಿ ಹೊವಲಯದಲ್ಲಿ ಬೃಹತ್ ಹೋರಾಟ ಮಾಡ್ತಿರುವ ರೈತರೊಂದಿಗೆ ಕೇಂದ್ರ ಸರ್ಕಾರ ಗುರುವಾರ ಮಾತುಕತೆ ನಡೆಸಿದೆ. ರೈತ ಮುಖಂಡರೊಂದಿಗೆ ಕೇಂದ್ರ ಕೃಷಿ ಸಚಿವರು, ರಾಜ್ಯ ಖಾತೆ ಸಚಿವರು ಹಾಜರಿದ್ರು.

ವಿಜ್ಞಾನ ಭವನದಲ್ಲಿ ನಡೆದ ಸಭೆಯಲ್ಲಿ ರೈತರ ಬೇಡಿಕೆಗಳನ್ನ ಆಲಿಸದ ಸಚಿವರು ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲವೆಂದು ಹೇಳಿದ್ದಾರೆ. ಆದ್ರೆ, ಕೃಷಿ ಮಸೂದಿಯಿಂದ ಹಿಂದಕ್ಕೆ ಸರಿಯುವ ಬಗ್ಗೆ ಹೇಳಿಲ್ಲ. ಅದೆ ರೀತಿ ರೈತರು ಸಹ ತಮ್ಮ ಬೇಡಿಕೆಯಿಂದ ಹಿಂದಕ್ಕೆ ಸರಿಯುವಿದಲ್ಲವೆಂದು ಹೇಳಿದ್ದಾರೆ.

ಕೃಷಿ ಮಸೂದೆಯನ್ನ ಕೈಬಿಡಬೇಕು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಅನ್ನೋ ಬೇಡಿಕೆಗೆ ರೈತರು ಬದ್ಧವಾಗಿದ್ದಾರೆ. ಹೀಗಾಗಿ ಚರ್ಚೆ ಎರಡು ಹಂತದಲ್ಲಿ ನಡೆಯಿತು. ಈ ವೇಳೆ ಸರ್ಕಾರ ರೈತ ಮುಖಂಡರಿಗೆ ಚಾ ಹಾಗೂ ಊಟದ ವ್ಯವಸ್ಥೆ ಮಾಡಿದ್ರೂ, ಇವರು ಅದನ್ನ ತಿರಸ್ಕರಿಸಿದ್ದಾರೆ. ತಮ್ಮ ಜೊತೆಗೆ ತೆಗೆದುಕೊಂಡು ಬಂದಿದ್ದ ಊಟದ ಡಬ್ಬಿಯಿಂದ ಊಟ ಮಾಡುವ ಸ್ವಾಭಿಮಾನಕ್ಕೆ ಮಾದರಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!