ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ನಡುವೆ ಇಂದು ಕೆಲ ವಿದ್ಯಾರ್ಥಿಗಳು ನೀಲು ಶಾಲು ಹಾಕಿಕೊಂಡು ಕಾಲೇಜಿಗೆ ಬಂದ ಘಟನೆ ನಗರದ ಐಡಿಎಸ್ ಜಿ ಕಾಲೇಜಿನಲ್ಲಿ ನಡೆದಿದೆ. ಹಿಜಾಬ್ ಬೆಂಬಲಿ ಕೆಲ ವಿದ್ಯಾರ್ಥಿಗಳು ನೀಲು ಶಾಲು ಹಾಕಿಕೊಂಡು ಬಂದರು.
ಕೇಸರಿ ಶಾಲು ಹಾಕಿಕೊಂಡು ಬಂದ ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ನೀಲಿ ಶಾಲು ಹಾಕಿಕೊಂಡು ಬಂದ ವಿದ್ಯಾರ್ಥಿಗಳು ಜೈ ಭೀಮ್ ಎಂದು ಘೋಷಣೆ ಹಾಕಿದರು. ಈ ಮೂಲಕ ಇಡೀ ಘಟನೆ ಮತ್ತೊಂದು ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.