ಪ್ರಜಾಸ್ತ್ರ ಫಲಶ್ರುತಿ: ಮಧ್ಯಾಹ್ನ ಸುದ್ದಿ.. ಸಂಜೆ ಮುರಿದ ಆಸನಗಳು ಬದಲು..

226

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಕಾಲೇಜು ರಸ್ತೆಯಿಂದ ವಿಜಯಪುರ ರಸ್ತೆಯವರೆಗೂ ಅಲ್ಲಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನಗಳನ್ನು ಸ್ಥಾಪಿಸಲಾಗಿತ್ತು. ಆದರೆ, ಬಹುತೇಕ ಮುರಿದುಹೋದ ಆಸನಗಳನ್ನು ಇಟ್ಟು ಹೋಗಿದ್ದರು. ಈ ಬಗ್ಗೆ ಪ್ರಜಾಸ್ತ್ರ ವೆಬ್ ಪತ್ರಿಕೆ ಮಧ್ಯಾಹ್ನ ಸುದ್ದಿ ಮಾಡಿದ್ದೆ ತಡ ಸಂಜೆಯೊಳಗೆ ಹೊಸದಾಗಿ ಆಸನಗಳನ್ನು ಹಾಕಲಾಗಿದೆ.

ಮಧ್ಯಾಹ್ನ ಪ್ರಕಟವಾದ ಸುದ್ದಿ

ಹೆಚ್.ಜಿ ಕಾಲೇಜು ಮುಂಭಾಗ, ಲಕ್ಷ್ಮಿ ದೇವಸ್ಥಾನ, ಆರ್.ಡಿ ಪಾಟೀಲ ಕಾಲೇಜು ಮುಂದೆ, ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಮುಂಭಾಗದಲ್ಲಿ ಕುಳಿತುಕೊಳ್ಳಲು ಮರಳು ಹಾಗೂ ಸಿಮೆಂಟ್ ಯಿಂದ ನಿರ್ಮಿಸಿದ ಮುರಿದು ಹೋದ ಆಸನಗಳನ್ನು ಹಾಕಲಾಗಿತ್ತು. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಹಾಗೂ ಪಿಡಬ್ಲುಡಿ ಎಇಇ ಅವರನ್ನು ವಿಚಾರಿಸಿದರೆ ನಾವು ಇಟ್ಟಿಲ್ಲವೆಂದು ಅವರಿವರ ಮೇಲೆ ಹಾಕಲಾಗಿತ್ತು.

ಸಂಜೆ ಬದಲಾದ ಆಸನಗಳು

ಈ ಬಗ್ಗೆ ಪ್ರಜಾಸ್ತ್ರ ಗುರುವಾರ ಮಧ್ಯಾಹ್ನ ಸುದ್ದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು(ಯಾವ ಇಲಾಖೆಯವರು ಅನ್ನೋ ಪ್ರಶ್ನೆ ಹಾಗೇ ಇದೆ.) ಮುರಿದುಹೋದ ಆಸನಗಳನ್ನು ಬದಲು ಮಾಡಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಖುಷಿಯಾಗಿರುವುದು ಸಂತಸದ ವಿಚಾರ.




Leave a Reply

Your email address will not be published. Required fields are marked *

error: Content is protected !!