ಫೇಸ್ ಬುಕ್ ನಲ್ಲಿ ಅವಹೇಳನ: ಹತ್ಯೆ ಮಾಡಿದವರ ಬಂಧನ

232

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಯಾವ ಯಾವ ಕಾರಣಕ್ಕೆ ಕೊಲೆಗಳು ನಡೆಯುತ್ತವೆ ಎಂದು ಹೇಳಲು ಆಗದು. ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಕ್ಕೆ ಯುವಕನೊಬ್ಬನನ್ನು ಕೊಲೆ ಮಾಡಲಾಗಿತ್ತು. ಇದೀಗ ಕೊಲೆಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಘು ಕಣಮೇಶ್ವರ, ತುಳಸಿರಾಮ ಹರಿಜನ, ಗರುಸಿದ್ಧ ದೋಣಿ ಬಂಧಿತ ಆರೋಪಿಗಳು. ರಮೇಶ ಧಾರಸಂಗ ಎಂಬಾತನನ್ನು ಹತ್ಯೆ ಮಾಡಿ ಕುಮಟಗಿ ತಾಂಡದ ಹತ್ತಿರು ಮೃತದೇಹ ಎಸೆದು ಪರಾರಿಯಾಗಿದ್ದರು. ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಇಂಡಿ ಡಿವೈಎಸ್ಪಿ ಶ್ರೀಧರ್ ದೊಡ್ಡಿ ನೇತೃತ್ವದಲ್ಲಿ ಕೊಲೆಯ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆ ವೇಳೆ ಬಳಸಿದ್ದ ಎರಡು ಬೈಕ್, ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ. ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!