ಅಥಣಿ: ಸರ್ಕಾರ ಉಚಿತವಾಗಿ ಬಡವರಿಗೆ ರೇಷನ್ ವಿತರಣೆ ಮಾಡಲು ಹೇಳಿದ್ರೆ, ತಾಲೂಕಿನಲ್ಲಿ ಅಕ್ರಮವಾಗಿ ಮಾರಾಟ ಮಾಡ್ತಿರುವುದು ಕಂಡು ಬಂದಿದೆ. ಕಳ್ಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡಿ ಇಡಲಾಗಿದ್ದ ಗೋದಾಮು ಮೇಲೆ ದಾಳಿ ಮಾಡಲಾಗಿದೆ.
ತಾಲೂಕಿನ ಅನಂತಪೂರ ಗ್ರಾಮದಲ್ಲಿ ಅಥಣಿ ಸಿಪಿಆಯ್ ಶಂಕರಗೌಡ ಬಸನಗೌಡರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ . ಪಡಿತರ ಅಕ್ಕಿಯನ್ನ ಅಕ್ರಮವಾಗಿ ಖರೀದಿಸಿ ಸಂಗ್ರಹಿಸಿಟ್ಟಿದ್ದ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ವ್ಯಾಪಾರಿ ಕುಮಾರ ಪಡಸಲಗಿ ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸುಮಾರು 60 ಕ್ವಿಂಟಾಲ್ ಅಕ್ಕಿಯನ್ನ ವಶ ಪಡಿಸಿಕೊಳ್ಳಲಾಗಿದೆ.
ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನ ಕಡಿಮೆ ದರದಲ್ಲಿ ಖರೀದಿಸಿ, ಅದನ್ನ ದುಬಾರಿ ಬೆಲೆಗೆ ಮಹಾರಾಷ್ಟ್ರಕ್ಕೆ ಮಾರಾಟ ಮಾಡುವ ದೊಡ್ಡ ಜಾಲವಿದೆ. ಇದನ್ನ ಮಟ್ಟ ಹಾಕಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ದಾಳಿ ವೇಳೆ ಪಿಎಸ್ಐ ಕುಮಾರ ಹಾಡಕರ ಹಾಗೂ ಸಿಬ್ಬಂದಿ ಇಂಚಲ, ಕೆ.ಶಿರಗೂರ, ಹಾದಿಮನಿ, ಇರಖಾನ, ಕಂಟಿಗೊಂಡ ಭಾಗವಹಿಸಿದ್ರು.